ಗಾಝಾ| ‘ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ಅಲ್ಲಿ ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲ ಗಾಝಾದವರಾಗಿರುತ್ತಾರೆ’. ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಕೊನೆಯುಸಿರೆಳೆಯುವ ಮುನ್ನ ಪ್ಯಾಲೆಸ್ತೀನ್ ಕವಿ ಹಿಬಾ ಕಮಾಲ್ ಅಬು ನಾದಾ ಬರೆದ ಸಾಲುಗಳಿವು. ಮರಣವನ್ನು ಎದುರು ನೋಡುತ್ತಾ ಹಿಬಾ ಬರೆದಿರುವ ಸಾಹಿತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ರೇಲಿ ದಾಳಿಯಿಂದ ಕೊಲ್ಲಲ್ಪಟ್ಟ, ಸೆರೆಹಿಡಿಯಲ್ಪಟ್ಟ ಮತ್ತು ಕಠಿಣ ಯಾತನೆ ಅನುಭವಿಸಿದ ತನ್ನ ಪ್ಯಾಲೆಸ್ತೀನ್ ಸಹೋದರ ಸಹೋದರಿಯರ ಮುಂದೆ ಹಿಬಾ ಹೀಗೆ ಬರೆದರು.
“ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ರಕ್ತದಿಂದ ತೊಯ್ದ ಬಟ್ಟೆಯಲ್ಲಿ ಕಿರುಚುವ ರೋಗಿಗಳು ಮತ್ತು ವೈದ್ಯರಿಲ್ಲ. ಮಕ್ಕಳ ಮೇಲೆ ಕೋಪಗೊಳ್ಳುವ ಶಿಕ್ಷಕರಿಲ್ಲ, ದುಃಖಿಸುವ ಮತ್ತು ನೋಯುತ್ತಿರುವ ಕುಟುಂಬಗಳಿಲ್ಲ. ವರದಿಗಾರರು ಆ ಸ್ವರ್ಗಲೋಕವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲರೂ ಗಾಝಾದ ನಿವಾಸಿಗಳಾಗಿರುತ್ತಾರೆ. ಅವರು ಒಟ್ಟಾಗಿ ಸ್ವರ್ಗದಲ್ಲಿ ಹೊಸ ಗಾಝಾವನ್ನು, ದಿಗ್ಬಂಧನವಿಲ್ಲದ ಗಾಝಾವನ್ನು ನಿರ್ಮಿಸುತ್ತಾರೆ”
ಹಿಬಾ ಈಗ ಸ್ವರ್ಗದಲ್ಲಿರುವ ಗಾಝಾದಲ್ಲಿ ಅಮರ ಪ್ರೇಮದ ಬಗ್ಗೆ ಬರೆಯುತ್ತಿರಬಹುದು ಎಂದು ಹಲವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಗಾಝಾದ ಖಾನ್ ಯೂನಿಸ್ನಲ್ಲಿ ನಿನ್ನೆ ಇಸ್ರೇಲಿ ದಾಳಿಯಲ್ಲಿ 32 ವರ್ಷದ ಹಿಬಾ ಕೊಲ್ಲಲ್ಪಟ್ಟರು. ‘ಮರಣ ಹೊಂದಿದವರಿಗಲ್ಲ ಆಕ್ಸಿಜನ್’ ಕಾದಂಬರಿಗಾಗಿ ಹಿಬಾ ಶಾರ್ಜಾ ಪ್ರಶಸ್ತಿ ಪಡೆದಿದ್ದರು.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
ಇರಾನ್ ಒಪ್ಪಂದ ಪಾಲಿಸದಿದ್ದರೆ ನೆತ್ತಿ ಮೇಲೆ ಬಾಂಬ್ ವರ್ಷಣ- ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್