ಗಾಝಾ| ‘ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ಅಲ್ಲಿ ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲ ಗಾಝಾದವರಾಗಿರುತ್ತಾರೆ’. ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಕೊನೆಯುಸಿರೆಳೆಯುವ ಮುನ್ನ ಪ್ಯಾಲೆಸ್ತೀನ್ ಕವಿ ಹಿಬಾ ಕಮಾಲ್ ಅಬು ನಾದಾ ಬರೆದ ಸಾಲುಗಳಿವು. ಮರಣವನ್ನು ಎದುರು ನೋಡುತ್ತಾ ಹಿಬಾ ಬರೆದಿರುವ ಸಾಹಿತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಸ್ರೇಲಿ ದಾಳಿಯಿಂದ ಕೊಲ್ಲಲ್ಪಟ್ಟ, ಸೆರೆಹಿಡಿಯಲ್ಪಟ್ಟ ಮತ್ತು ಕಠಿಣ ಯಾತನೆ ಅನುಭವಿಸಿದ ತನ್ನ ಪ್ಯಾಲೆಸ್ತೀನ್ ಸಹೋದರ ಸಹೋದರಿಯರ ಮುಂದೆ ಹಿಬಾ ಹೀಗೆ ಬರೆದರು.
“ನಾವೀಗ ಏಳನೇ ಸ್ವರ್ಗದಲ್ಲಿದ್ದೇವೆ. ಅಲ್ಲಿ ಹೊಸ ನಗರ ನಿರ್ಮಾಣವಾಗಲಿದೆ. ರಕ್ತದಿಂದ ತೊಯ್ದ ಬಟ್ಟೆಯಲ್ಲಿ ಕಿರುಚುವ ರೋಗಿಗಳು ಮತ್ತು ವೈದ್ಯರಿಲ್ಲ. ಮಕ್ಕಳ ಮೇಲೆ ಕೋಪಗೊಳ್ಳುವ ಶಿಕ್ಷಕರಿಲ್ಲ, ದುಃಖಿಸುವ ಮತ್ತು ನೋಯುತ್ತಿರುವ ಕುಟುಂಬಗಳಿಲ್ಲ. ವರದಿಗಾರರು ಆ ಸ್ವರ್ಗಲೋಕವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಅಮರ ಪ್ರೇಮದ ಬಗ್ಗೆ ಹಾಡುವವರೆಲ್ಲರೂ ಗಾಝಾದ ನಿವಾಸಿಗಳಾಗಿರುತ್ತಾರೆ. ಅವರು ಒಟ್ಟಾಗಿ ಸ್ವರ್ಗದಲ್ಲಿ ಹೊಸ ಗಾಝಾವನ್ನು, ದಿಗ್ಬಂಧನವಿಲ್ಲದ ಗಾಝಾವನ್ನು ನಿರ್ಮಿಸುತ್ತಾರೆ”
ಹಿಬಾ ಈಗ ಸ್ವರ್ಗದಲ್ಲಿರುವ ಗಾಝಾದಲ್ಲಿ ಅಮರ ಪ್ರೇಮದ ಬಗ್ಗೆ ಬರೆಯುತ್ತಿರಬಹುದು ಎಂದು ಹಲವರು ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಗಾಝಾದ ಖಾನ್ ಯೂನಿಸ್ನಲ್ಲಿ ನಿನ್ನೆ ಇಸ್ರೇಲಿ ದಾಳಿಯಲ್ಲಿ 32 ವರ್ಷದ ಹಿಬಾ ಕೊಲ್ಲಲ್ಪಟ್ಟರು. ‘ಮರಣ ಹೊಂದಿದವರಿಗಲ್ಲ ಆಕ್ಸಿಜನ್’ ಕಾದಂಬರಿಗಾಗಿ ಹಿಬಾ ಶಾರ್ಜಾ ಪ್ರಶಸ್ತಿ ಪಡೆದಿದ್ದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ