ಮಹಬುಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡ SSF ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ G-Meet ಕಾರ್ಯಕ್ರಮವು ಸೆ.2 ರಂದು ಮಹಬುಲ ಕಲಾ ಆಡಿಟೋರಿಯಂನಲ್ಲಿ ಬಹು ಹುಸೈನ್ ಮುಸ್ಲಿಯಾರ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು ಬಾದುಷಾ ಸಖಾಫಿ ಅವರು ದುಆ ನೆರವೇರಿಸಿ,ಜನಾಬ್ ಯಾಕೂಬ್ ಕಾರ್ಕಳ ಪ್ರ:ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದರು. ಬಹು ಉಮರ್ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘಟನ ವಿಭಾಗ ಅಧ್ಯಕ್ಷರು ಆಸಂಷಾ ಭಾಷಣ ಮಾಡಿ SSF ಬಗ್ಗೆ ವಿವರಿಸಿದರು,ಬಹು ಬಾದುಷ ಸಖಾಫಿ ಮಾತನಾಡಿ, SSF ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಇದರ ಪ್ರಚಾರಕ್ಕಾಗಿ ಆಗಮಿಸಿದ ರಿಸೀಪ್ಷನ್ ಕನ್ವಿನರ್ ಬಹು ಫಾರೂಕ್ ಅಮಾನಿ ಬೆಂಗಳೂರು ಮಾತನಾಡಿ, ಜೀವನ ಶೈಲಿ ಮತ್ತು SSF ಸಂಘಟನೆ ನಮ್ಮ ಜೀವನದ ಶಿಷ್ಟಚಾರವನ್ನು ಬದಲಾಯಿಸಿ ಮನುಷ್ಯನಿಗೆ ಉತ್ತಮ ಜೀವನ ನಡೆಸುವ ಅರಿವು ಮೂಡಿಸಲು ಉತ್ತಮ ಅವಕಾಶವಾಗಿದೆ ಎಂದರು.
SSF ಸಂಘಟನೆಯ ಸದಸ್ಯತ್ವ ಹೊಂದಿರುವ ಮಕ್ಕಳು, ಮದ್ಯಪಾನ, ಅಮಲು ಪದಾರ್ಥ ಬಗ್ಗೆ ಜಾಗೃತಿಗೊಂಡಿರುತ್ತಾರೆ. ಸ್ವಾತಂತ್ರ್ಯ ಭಾರತದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದ ಅವರು, ನಾವೆಲ್ಲರೂ ಬಾರತಿಯರು ಸೌಹಾರ್ದ, ಪ್ರೀತಿಯಿಂದ ಜೀವಿಸುವುದು ನಮ್ಮ ಹಕ್ಕಾಗಿದೆ ಎಂದು ವಿವರಿಸಿದರು.



KCF ಅಧ್ಯಕ್ಷರು ಬಹು ಜನಾಬ್ ಹುಸೈನ್ ಎರುಮಾಡ್ ಮಾತನಾಡಿ SSF ಹಾಗೂ KCF ಸದಸ್ಯರಿಗೆ ಇದು ಮಾದರಿ ಸಂಘಟನೆ ಎಂದು ಮನವರಿಕೆ ಮಾಡಿದರು.
ವೇದಿಕೆ ಯಲ್ಲಿ ಪ್ರಚಾರ ಮತ್ತು ಪ್ರಸಾರ ವಿಭಾಗದ ಅಧ್ಯಕ್ಷ ಸಾಹುಲ್ ಹಮೀದ್ ಸಅದಿ ಝುಹ್ರಿ ಜಹರ ಸೆಕ್ಟರ್ ಅಧ್ಯಕ್ಷ ಶಫೀಕ್ ಅಹ್ಸನಿ ಹಾಗೂ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್ (INC) ಸದಸ್ಯರು ಆದ ಝಕರಿಯಾ ಅನೇಕಲ್ ಉಪಸ್ಥಿತಿ ಇದ್ದು ಕೊನೆಯಲ್ಲಿ , ಬಹುಮಾನ್ಯ ಮಾಹಿನ್ ಸಖಾಫಿ ಉಸ್ತಾದರು ದುವಾ ಗೈದರು , ಧನ್ಯವಾದವನ್ನು ಆಡಳಿತ ವಿಭಾಗ ಅಧ್ಯಕ್ಷ ಅಬ್ಬಾಸ್ ಬಳಂಜ ನೆರವೇರಿಸಿದರು.
ವರದಿ :ಇಬ್ರಾಹಿಂ ವೇಣೂರು ಕುವೈಟ್
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ