janadhvani

Kannada Online News Paper

ಮಂಗಳಪೇಟೆ ಮುಸ್ಲಿಂ ಜಮಾಅತ್‌ಗೆ ಅಬ್ದುಲ್ ಹಮೀದ್ ಸಾರಥ್ಯ

ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಮಂಗಳಪೇಟೆ ಯುನಿಟ್‌‌ನ ನೂತನ ಸಮಿತಿ ರೂಪೀಕರಣ ಸಭೆಯು ಇತ್ತೀಚಿಗೆ ಮಂಗಳಪೇಟೆ SSF ಕಛೇರಿಯಲ್ಲಿ ನಡೆಯಿತು. ನೂತನ ಸಮಿತಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಹಮೀದ್,ಉಪಾಧ್ಯಕ್ಷರಾಗಿ ಸೇಕುಞಿ,ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ರಹ್ಮಾನ್, ಜೊತೆಕಾರ್ಯದರ್ಶಿಯಾಗಿ MU ಮೊಯಿದಿನಬ್ಬ, ಮುಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಯಾಗಿ ಮೊಯಿದಿನಬ್ಬ.ಮುಸ್ಲಿಂ ಜಮಾಅತ್‌ನ ಉದ್ದೇಶ ಮತ್ತು ಗುರಿಯನ್ನು ಪಕ್ರುದ್ದೀನ್ ಬಾವರು ವಿವರಿಸಿದರು. ಸಭೆಯಲ್ಲಿ SYS ಸೆಂಟರ್ ಸಮೀತಿಯ ಇಸ್ಮಾಯಿಲ್, ಹನೀಫ್, ಬಾವಾಕ ಹಾಗೂ ಮಂಗಳಪೇಟೆ SYS ನಾಯಕರು ಭಾಗವಹಿಸಿದ್ದರು.