ಕುವೈಟ್: ಪರ್ವಾನಿಯ್ಯ ಮೆಟ್ರೋ ಸಭಾಂಗಣದಲ್ಲಿ ಅಕ್ಟೋಬರ್ 28-2022 ರಂದು ಕೊಡಗು ಸುನ್ನಿ ವೇಲ್ಪೇರ್ ಅಸೋಸಿಯೇಷನ್ ಅಧ್ಯಕ್ಷರಾದ ಬಾದುಶ ಸಖಾಫಿರವರ ನೇತೃತ್ವದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ 2022-23 ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಾದುಶ ಸಖಾಫಿ ಕಾರೆಕ್ಕಾಡ್.
ಪ್ರಧಾನ ಕಾರ್ಯದರ್ಶಿಯಾಗಿ ರಹೀಮ್ ಕೊಳಕ್ಕೇರಿ ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಹಾಜಿ ಹುಂಡಿ.
ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಸಿರಾಜ್ ಸುಂಟಿಕೊಪ್ಪ ಕಾರ್ಯದರ್ಶಿ ಹಾಫಿಲ್ ಅಶ್ರಫ್ ಮಿಸ್ಬಾಹಿ ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಶರೀಫ್ ಮುಸ್ಲಿಯಾರ್ ಅಯ್ಯಂಗೇರಿ ಕಾರ್ಯದರ್ಶಿ ಶರೀಫ್ ಸಹದಿ ಕೊಡ್ಲಿಪೇಟ. ಸಾಂತ್ವನ ವಿಭಾಗದ ಅಧ್ಯಕ್ಷ ರಾಗಿ ಅಬ್ದುಲ್ ರೆಹಮಾನ್ ಪಾರಪಳ್ಳಿ ಕಾರ್ಯದರ್ಶಿ ಅಶ್ರಫ್ ಕೊಂಡಗೇರಿ
ಅಡ್ಮಿನ್ ವಿಭಾಗದ ಅಧ್ಯಕ್ಷ ರಾಗಿ ರಿಯಾಜ್ ಸುಂಟಿಕೊಪ್ಪ ಕಾರ್ಯದರ್ಶಿ ಮುನೀರ್ ಹಾಕತ್ತೂರ್. ನೇಮಕಗೊಂಡರು.
ಅದೇ ರೀತಿ ಕಾರ್ಯಕಾರಿ ಸಮಿತಿಗೆ 9 ಸದಸ್ಯರನ್ನು ನೇಮಕ ಮಾಡಲಾಯಿತು.
ಸಮಿತಿಯ ಕೋರ್ಡಿನೇಟರಾಗಿ ಇಸ್ಮಾಯಿಲ್ ಅಯ್ಯಂಗೇರಿ ಹಾಗೂ ಸಲಹಾ ಸಮಿತಿ ಚೇರ್ಮಾನಾಗಿ ಮಾಹಿನ್ ಸಖಾಫಿ ಅಯ್ಯಂಗೇರಿ ಸಲಹಾ ಸಮಿತಿ ಸದಸ್ಯರಾಗಿ ಮುಹಮ್ಮದ್ ಹಾಜಿ ಮೂರ್ನಾಡ್ ಇಬ್ರಾಹಿಂ ಚೇರಿಯಪರಂಬು ಅಬ್ದುಲ್ ಖಾದರ್ ಮಡಿಕೇರಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ನಿಯಂತ್ರಕ(ಆರ್ ಓ) KCF ಸಮಿತಿಯ ಅಧ್ಯಕ್ಷರಾದ ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು ಅವರ ನೇತ್ರತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಹುಸೈನ್ ಮುಸ್ಲಿಯಾರ್ ಮತ್ತು ಇಸ್ಮಾಯಿಲ್ ಅಯ್ಯಂಗೇರಿ ಮಾತಾಡಿ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ ಪ್ರತಿ ಸಮಿತಿಗಳ ಉದ್ದೇಶ ಮತ್ತು ಅದರ ಕಾರ್ಯವೈಕರಿಯ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿ ಕೊಡಗು ಸುನ್ನಿ ವೇಲ್ಪೇರ್ ಅಸೋಸಿಯೇಷನ್ ನ ಕಾರ್ಯಕರ್ತನ ಪ್ರವೃತ್ತಿ ಹೇಗಿರಬೇಕು ಎಂದು ತಿಳಿಸಿದರು.
ಪ್ರಸ್ತುತ ಸಭೆಯ ಮುಂಚಿತವಾಗಿ ಅದ್ದೂರಿಯಾಗಿ ಈದ್ ಮೀಲಾದ್ ಕಾರ್ಯಕ್ರಮ ನಡೆಯಿತು.
ಹಾಫಿಲ್ ಅಶ್ರಫ್ ಮಿಸ್ಬಾಹಿ ರವರ ನೇತೃತ್ವದಲ್ಲಿ ನಡೆದ ಮೌಲಿದ್ ಪಾರಾಯಣ ದೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಸಯ್ಯಿದ್ ಹಬೀಬ್ ಕೊಯ ತಂಗಲ್ ಪ್ರಾರ್ಥನೆ ನಿರವೈಸಿ ಸಭೆಯನ್ನು ಹುಸೈನ್ ಮುಸ್ಲಿಯಾರ್ ಉದ್ಘಾಟನೆ ಗೈದರು.
ಕಾರ್ಯಕ್ರಮದಲ್ಲಿ ICF ಪ್ರ.ಕಾರ್ಯದರ್ಶಿ ಅಬ್ದುಲ್ಲ ವಡಗರ ಮುಖ್ಯ ಭಾಷಣ ಮಾಡಿದರು.
ಅಮೀನ್ ಸಕಾಫಿ ಕೇರಳ
ಬಶೀರ್ ಸಖಾಫಿ. ಬಾದುಶ ಸಖಾಫಿ. ಹುಸೈನ್ ಮುಸ್ಲಿಯಾರ್. ಶರೀಫ್ ಮುಸ್ಲಿಯಾರ್ ಹಮೀದ್ ಸಹದಿ.ಉಮರ್ ಝುಹರಿ.ಯಃಕೂಬ್ ಕಾರ್ಕಳ.ಆಶಂಷ ಭಾಷಣ ಮಾಡಿದರು
ಹನೀಫ್ ಚೇರಿಯಪರಂಬು ಮತ್ತು ಕಲಂದರ್ ಶಾಫಿ ಹಾಡು ಆಲಾಪಿಸಿದರು.
ಇಸ್ಮಾಯಿಲ್ ಅಯ್ಯಂಗೇರಿ ಸ್ವಾಗತಿಸಿ ಹನೀಫ್ ಚೇರಿಯಪರಂಬು ಧನ್ಯವಾದ ನಡೆಸಿ ಕೊನೆಯಲ್ಲಿ ಬಶೀರ್ ಸಖಾಫಿ ಅವರು ದುಆ ನಿರ್ವಹಿಸಿದರು.
















ಇನ್ನಷ್ಟು ಸುದ್ದಿಗಳು
ಈದ್ ಸಂಭ್ರಮದ ಮೇಲೆ ಯುದ್ಧದ ಛಾಯೆ: ಕುವೈತ್ ಗ್ರ್ಯಾಂಡ್ ಮಸೀದಿಯಲ್ಲಿ ಈದ್ ಪ್ರಾರ್ಥನೆ ರದ್ದು
ಈದ್ ನಂತರ ಸರ್ಕಾರಿ ಕಚೇರಿ ಅವಧಿ ಕಡಿತ- ಶೇ. 30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
ಕುಟುಂಬ ಸಂದರ್ಶಕ ವೀಸಾದಲ್ಲಿರುವ ಭಾರತೀಯರ ಮಾಹಿತಿ ಸಂಗ್ರಹಕ್ಕೆ ರಾಯಭಾರ ಕಚೇರಿ ಕ್ರಮ
ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ
ಕುವೈತ್ ಮೇಲೆ ಕ್ಷಿಪಣಿ ದಾಳಿ- ಅಮೆರಿಕಾ ಸೇನಾ ವಿಮಾನಗಳು ಪತನ
ವಲಸಿಗರಿಗೆ ಶುಭ ಸುದ್ದಿ: ‘ಸಹಲ್’ ಅಪ್ಲಿಕೇಶನ್ ನಲ್ಲಿ ಪಾಸ್ಪೋರ್ಟ್ ವಿವರಗಳನ್ನು ನವೀಕರಿಸಲು ಸೌಲಭ್ಯ
ಕುವೈತ್ನಲ್ಲಿ ಚಾಲನಾ ಪರವಾನಗಿ ಕಾರ್ಯವಿಧಾನಗಳು ಮತ್ತಷ್ಟು ಕಠಿಣ
ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ
ಇಸ್ರಾಅ್ ಮತ್ತು ಮಿ’ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ
ಬ್ಯಾಂಕ್ ಸಾಲ: ಮರುಪಾವತಿಸದ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂಧನ