ಗುಜರಾತ್ ನ ಸೂರತ್ನಲ್ಲಿ ಚಿನ್ನದ ಮಳೆಯ ಸುದ್ದಿ ಭಾರೀ ಸದ್ದು ಮಾಡಿದೆ. ಸೂರತ್ ಏರ್ಪೋರ್ಟ್ ಸಮೀಪದ ದುಮಾಸ್ ಗ್ರಾಮದಲ್ಲಿ ಹಳೇ ನಾಣ್ಯದ ರೂಪದಲ್ಲಿರುವ ಚಿನ್ನದ ಬಿಸ್ಕಟ್ ಮಾದರಿ ಬಿಲ್ಲೆಗಳು ಪತ್ತೆಯಾಗಿವೆ.ಚಿನ್ನದ ಬಿಲ್ಲೆಗಳನ್ನು ಹಾರಿಸಿಕೊಳ್ಳಲು ಜನರು ಮುಗಿಬಿದ್ದಾರೆ. ಕಾರ್, ಬೈಕ್ಗಳಲ್ಲಿ ಬಂದು ಚಿನ್ನಕ್ಕಾಗಿ ಅಲೆದಾಡಿದ್ದಾರೆ.
ಪತ್ತೆಯಾದ ಚಿನ್ನದ ನಾಣ್ಯ ಮಾದರಿ ಬಿಲ್ಲೆಗಳ ಮೇಲೆ ಕೆಲವು ಸಿಂಬಲ್ಗಳಿವೆ. ಹೀಗಾಗಿ ಇವುಗಳನ್ನು ಸಂಗ್ರಹ ಮಾಡಿರೋ ಅಧಿಕಾರಿಗಳು ಪರೀಕ್ಷೆಗೂ ರವಾನೆ ಮಾಡಿದ್ದಾರೆ. ಸೂರತ್ ವಜ್ರಾಭರಣ ಉದ್ಯಮಕ್ಕೆ ಫೇಮಸ್. ಈ ಗ್ರಾಮದ ಪಕ್ಕದಲ್ಲೇ ಏರ್ಪೋರ್ಟ್ ಕೂಡಾ ಇದೆ. ಹೀಗಾಗಿ ಯಾರಾದ್ರೂ ಮಾರಾಟಕ್ಕೆ ತಗೆದುಕೊಂಡು ಹೋಗುವಾಗ ಚೆಲ್ಲಿರಬಹುದೇ, ಅಕ್ರಮವಾಗಿ ಸಾಗಿಸುತ್ತಿರುವಾಗ ಸಿಕ್ಕಿ ಬೀಳೋ ಭಯದಲ್ಲಿ ಯಾರಾದ್ರೂ ಎಸೆದು ಹೋಗಿರಬಹುದೇ ಎನ್ನುವ ಕುತೂಹಲ ಮನೆ ಮಾಡಿದೆ.
ಇನ್ನು ಇತ್ತ ಬೆಂಗಳೂರಿನ ಅನೇಕಲ್ ನಲ್ಲೂ ಸುರೀತಾ ಇದೆಯಂತೆ ಚಿನ್ನದ ಮಳೆ. ಮಳೆಯ ಜತೆ ಚಿನ್ನವೂ ಸುರಿದಿದೆ ಎನ್ನುತ್ತಿದ್ದಾರೆ ಅನೇಕಲ್ ಜನ. ಚಿನ್ನಕ್ಕಾಗಿ ಮುಗಿಬಿದ್ದು ಬಂಗಾರ ಹೆಕ್ಕುವಲ್ಲಿ ಇಲ್ಲಿನ ಜನ ತಲ್ಲೀನರಾಗಿದ್ದಾರೆ. ಬೆಂಗಳೂರಿನ ಹೊರವಲಯದ ಸರ್ಜಾಪುರ, ಬಾಗಲೂರು ಸಮೀಪದಲ್ಲಿ ಚಿನ್ನದ ಮಳೆ ವದಂತಿ ಹರಡಿದ್ದು ಅಲ್ಲಿನ ಜನ ಸದ್ಯ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ. ಗಿಡ ಗಂಟೆಗಳನ್ನು ಲೆಕ್ಕಿಸದೆ ನೂರಾರು ಜನರು ಬಂಗಾರಕ್ಕಾಗಿ ಮುಗಿಬಿದ್ದಿದ್ದಾರೆ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ