ನೆಲ್ಯಾಡಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ವಿಪರೀತ ಮಳೆಯಿಂದ ಬೃಹದಾಕಾರದ ಮರದ ದಿಮ್ಮಿಗಳು ತೇಲಿಕೊಂಡು ಬಂದು ನೆಲ್ಯಾಡಿ ಸಮೀಪದ “ಮಡಂಜೊಡಿ” ಎಂಬಲ್ಲಿ ಅಣೆಕಟ್ಟಿನಲ್ಲಿ ಬ್ಲಾಕ್ ಆಗಿತ್ತು. ಪರಿಣಾಮ ಅಣೆಕಟ್ಟು ಮುಖಾಂತರ ಸುಗಮ ನೀರು ಸಂಚಾರಕ್ಕೆ ಅಡ್ಡಿಯಾಗಿ, ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿ ಸಮೀಪದ ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶವಾಗುವ ಸಂಭವ ಹಾಗೂ ನಡೆದುಕೊಂಡು ಹೋಗುವ ದಾರಿ ಇಲ್ಲದಾಗಿತ್ತು.
ಕಂಗಾಲಾದ ಸ್ಥಳೀಯ ರೈತರು ಸಹಾಯಕ್ಕಾಗಿ ನೆಲ್ಯಾಡಿ ಎಸ್ ಡಿ ಪಿ ಐ ಪಾರುಗಾಣಿಕಾ (ರೆಸ್ಕ್ಯೂ) ತಂಡವನ್ನು ಸಂಪರ್ಕಿಸಿದಾಗ ಸುಮಾರು ಮೂವತ್ತರಷ್ಟು ಎಸ್.ಡಿ.ಪಿ.ಐ ಪಾರುಗಾಣಿಕಾ ಸದಸ್ಯರು ಮೂರು ದಿನಗಳ ಶ್ರಮದಿಂದ ಅಣೆಕಟ್ಟಿನಲ್ಲಿ ನೀರಿನ ಹರಿಯುವಿಕೆಗೆ ತಟಸ್ಥ ಒಡ್ಡುತ್ತಿದ್ದ ಬೃಹದಾಕಾರದ ಮರಗಳನ್ನು ಅಲ್ಲಿಂದ ತೆರವುಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿ ರೈತರಿಗೆ ನೆರವಾದರು. ಪಾರುಗಾಣಿಕಾ ತಂಡಕ್ಕೆ ಉಪಹಾರದ ವ್ಯವಸ್ಥೆಯನ್ನು ಉಸ್ಮಾನ್ ಕೆ.ಕೆ ಕೊಲ್ಪೆ ಹಾಗೂ ಸ್ಥಳಿಯರಾದ ರವಿ ಎಂಬವರು ಮಾಡಿಕೊಟ್ಟರು.
ಎಸ್.ಡಿ.ಪಿ.ಐ ಪಾರುಗಾಣಿಕಾ ತಂಡದ ಸದಸ್ಯರ ಈ ಶ್ರಮವನ್ನು ಸ್ಥಳೀಯರು, ರೈತರು, ಅರಣ್ಯ ಇಲಾಖೆಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್