janadhvani

Kannada Online News Paper

ಎಸ್.ಎಂ ಉಸ್ತಾದರ ಶಿಷ್ಯಂದಿರ ಸಂಘ ಅಸ್ತಿತ್ವಕ್ಕೆ

ಪುತ್ತೂರು: ಡೆಮ್ಮಂಗರ ಇಮಾಂ ನವವಿ ಅಕಾಡೆಮಿ ಕ್ಯಾಂಪಸ್ ನಲ್ಲಿ ನಡೆದ ಶೈಖುನಾ ಸುಲೈಮಾನ್ ಉಸ್ತಾದರ ಶಿಷ್ಯಂದಿರ ಸಂಗಮದಲ್ಲಿ ಶೈಖುನಾರ ಗೌರವ ಸಾನಿಧ್ಯದಲ್ಲಿ ಎಸ್.ಎಂ ಅಬ್ದುರ್ರಝಾಖ್ ಸಅದಿ ಎಂ.ಎ ಉಸ್ತಾದರ ದರ್ಸ್ ಇಶಾಅತುಸ್ಸುನ್ನ ಹಳೆ ವಿಧ್ಯಾರ್ಥಿ ಸಂಘ ರೂಪೀಕರಿಸಲಾಯಿತು.

ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಬಾಜಾರ್ ,ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಸಅದಿ ಪದ್ಮುಂಜ ,ಕೋಶಾಧಿಕಾರಿಯಾಗಿ ಅನ್ವರ್ ಮುಸ್ಲಿಯಾರ್ M.Com,B.ed ಅವರನ್ನು ನೇಮಿಸಲಾಯಿತು.

ಉಪಾಧ್ಯಕ್ಷರಾಗಿ ಇಸ್ಮಾಈಲ್ ಮನ್ಸೂರ್ ಅಹ್ಮದ್ ಸಅದಿ ಅಲ್ ಕಾಮಿಲಿ, ಅಬ್ದುಲ್ ಸಲೀಂ ನಈಮಿ ಬಾಜಾರ್ ಜೊತೆ ಕಾರ್ಯದರ್ಶಿಯಾಗಿ ಶಾಫಿ ಸಅದಿ ಬೋಳಿಯಾರ್, ಅಬ್ದುರ್ರಹ್ಮಾನ್ ಹುಮೈದಿ, ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಹಾಫಿಳ್ ತೌಸೀಫ್ ಮುಸ್ಲಿಯಾರ್ ಕೆಮ್ಮಾಣೆ ರವರನ್ನು ಆರಿಸಲಾಯಿತು.

ಕಾರ್ಯಕ್ರಮಕ್ಕೆ ಅಬ್ದುಲ್ ರಶೀದ್ ಸಅದಿ ಪದ್ಮುಂಜ, ಅನ್ವರ್ ಮುಸ್ಲಿಯಾರ್, ಶಾಫಿ ಸಅದಿ ಬೋಳಿಯಾರ್ ಶುಭ ಹಾರೈಸಿದರು.