janadhvani

Kannada Online News Paper

ಮೈಸೂರು:ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮ

ಮೈಸೂರು:ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮವು ಎಸ್ಸೆಸ್ಸೆಫ್ ಮೈಸೂರು ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಅಲ್ ನೂರ್ ಎಜ್ಯುಕೇಶನ್ ಸೆಂಟರ್ ಮೈಸೂರಿನಲ್ಲಿ ನಡೆಯಿತು.

ಸಯ್ಯದ್ ಸ್ವಾದಿಖ್ ನೂರಾನಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ತರಗತಿಯನ್ನು ನಡೆಸಿದರು.

ಅಬ್ದುಲ್ ಖಾದರ್ ಹಾಜಿ,ಯೂನುಸ್ ಮೈಸೂರು,ಟೀಮ್ ಹಸನೈನ್ ಗೈಡ್ ಹಸನ್ ನೂರಾನಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಜಝೀಲ್ ನೂರಾನಿ ಸ್ವಾಗತಿಸಿ,ಕೊನೆಗೆ ವಂದಿಸಿದರು.