ಕಾಞಂಗಾಡ್: ಖ್ಯಾತ ಸೂಫಿವರ್ಯರೂ, ಆಧ್ಯಾತ್ಮ ನಾಯಕರೂ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಮರ್ಹೂಮ್ ಶೈಖುನಾ ಸಿ.ಪಿ. ಮಹಮ್ಮದ್ ಕುಂಞಿ ಮುಸ್ಲಿಯಾರ್ ರವರು ಪ್ರತ್ಯೇಕ ಇಜಾಝತ್ (ಅನುಮತಿ) ಪ್ರಕಾರ ತಮ್ಮ ಕಾಞಂಗಾಡ್ , ಹಳೆ ಕಡಪುರದ ‘ಗೌಸಿಯಾ ಮಂಝಿಲ್’ ನಲ್ಲಿ ವರ್ಷಂಪ್ರತಿ ರಬೀಉಲ್ ಆಖಿರ್ ತಿಂಗಳಲ್ಲಿ ನಡೆಸಿಕೊಂಡು ಬರುತ್ತಿದ್ದ, ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಆಗಿದೆ “ರಾತೀಬುಲ್ ಗೌಸಿಯತುಲ್ ಖಾದಿರಿಯ-ಜಲಾಲಿಯ ದಿಕ್ರ್ ಹಲ್ಕ”. ಶೈಖುನಾ ತಾಜುಲ್ ಉಲಾಮಾ ಸಹಿತ ಅನೇಕ ವಿದ್ವತ್ ಪುರುಷರು, ಸಾದಾತುಗಳು ನಿರಂತರ ಭಾಗವಹಿಸುತ್ತಿದ್ದ ; ಆಧ್ಯಾತ್ಮಿಕ ಮಹತ್ವವುಳ್ಳ, ಪ್ರಾರ್ಥನೆಗೆ ಉತ್ತರ ಲಭ್ಯವಿರುವ, ಉದ್ದೇಶ ಸಾಫಲ್ಯದ ಅನೇಕ ನಿದರ್ಶನಗಳಿರುವ ವಿಶೇಷ ಮಜ್ಲಿಸಿದು. ಉಸ್ತಾದರ ವಫಾತ್ ಬಳಿಕವೂ ಮಶಾಯಿಕ್ ಗಳ ಪರಂಪರಾಗತ ರೂಢಿಯಂತೆ ಇಂದಿಗೂ ಈ ಮಜ್ಲಿಸನ್ನು ಉಸ್ತಾದರ ಮಕ್ಕಳು ಹಾಗೂ ಕುಟುಂಬಸ್ಥರು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಈ ವರ್ಷ 60ನೇ ವರ್ಷದ ಮಜ್ಲಿಸ್ ಆಗಿದ್ದು: ಇದೇ ಅಕ್ಟೋಬರ್ 18 ಮತ್ತು 19 ನೇ ದಿನಾಂಕಗಳಲ್ಲಿ ಆಯೋಜಿಸಲಾಗಿದೆ. ಅ. 18 ರಂದು ಮಗ್ರಿಬ್ ನಮಾಜಿನ ನಂತರ; ಖ್ಯಾತ ಬುರ್ದಾ ಪ್ರಕೀರ್ತಕರಾದ ಹಾಫಿಲ್ ಝೈನುಲ್ ಆಬಿದ್ ಸಖಾಫಿ ಮಂಬುರಂ ಇವರ ತಂಡದ ನೇತೃತದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ಅ.19 ರಂದು ಮಗ್ರಿಬ್ ಬಳಿಕ ನಡೆಯುವ ‘ರಾತೀಬುಲ್ ಗೌಸಿಯತುಲ್ ಖಾದಿರಿಯ್ಯ ಜಲಾಲಿಯ ದಿಕ್ರ್ ಹಲ್ಕ’ ದ ನೇತೃತ್ವವನ್ನು ರೂಹುಸ್ಸಾದಾತ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಹೈದ್ರೋಸಿ ಮುತ್ತು ಕೋಯ (ಎಲಂಗೂರು ತಂಗಳ್) ವಹಿಸಲಿದ್ದಾರೆ.
ಉಸ್ತಾದರ ಶಿಷ್ಯಂದಿರು, ಅಭಿಮಾನಿಗಳು, ದೀನೀ ಪ್ರೇಮಿಗಳನ್ನು ಈ ಅಧ್ಯಾತ್ಮ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿ ಆಹ್ವಾನಿಸಿದ್ದು, ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಿದೆ.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ