janadhvani

Kannada Online News Paper

ಸಿರಾಜುಲ್ ಹುದಾ ಮದರಸ ಇರಾ ಸೈಟ್: ವಿಜೃಂಭಣೆಯ ಸ್ವಾತಂತ್ರ್ಯೋತ್ಸವ

ಮುಡಿಪು :ಯಸ್ ಯನ್ ಅಬ್ದುಲ್ ಕರೀಮ್ ಜುಮಾ ಮಸೀದಿ ಇರಾಸೈಟ್ ಇಲ್ಲಿನ ಸಿರಾಜುಲ್ ಹುದಾ ಮದರಸ ವಠಾರದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಕಮಿಟಿ ಅಧ್ಯಕ್ಷರಾದ ಬಹು ಅಬ್ದುಲ್ ರವೂಫ್ ರವರು ವಹಿಸಿದ್ದರು. ಜುಮಾ ಮಸೀದಿ ಇರಾಸೈಟ್ ಇಲ್ಲಿನ ಖತೀಬ್ ಹಸನ್ ಅಹ್ಸನಿ ದುಆ ಹಾಗೂ ಸಂದೇಶ ಭಾಷಣ ಮಾಡುತ್ತಾ ಹಲವು ಮಂದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು,ಅದನ್ನು ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ನಾವು ಸನ್ನದ್ಧರಾಗಬೇಕಿಗಿದೆ ಎಂದರು.

ಸಿರಾಜುಲ್ ಹುದಾ ಮದರಸದ ಮುಅಲ್ಲಿಮ್ ಮಹಮ್ಮದ್ ಅಶ್ರಫ್ ಝುಹರಿ,ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಸಭೆಯ ಮುಂದಿಟ್ಟರು. ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಉಮರ್.ಎಸ್. ಕೋಶಾಧಿಕಾರಿ ಉಮರ್ ಸಂಗಂ. ಜೊತೆ ಕಾರ್ಯದರ್ಶಿ ಝೈನುದ್ದೀನ್. ಜಮಾಅತ್ ಕಮಿಟಿ ಸದಸ್ಯರುಗಳಾದ ಇಬ್ರಾಹಿಮ್ ಪಿ.ಎ.ರಹೀಮ್ ಪರ್ಲಡ್ಕ,ಅಬ್ದುಲ್ ರಹಿಮಾನ್ ಅಂಗಡಿ ಹಾಗೂ ಎಲ್ಲಾ ಅಂಗಸಂಸ್ಥೆಗಳ ನಾಯಕರು, ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಲಾಯಿತು.

error: Content is protected !! Not allowed copy content from janadhvani.com