janadhvani

Kannada Online News Paper

ಜ.20: ಕುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್ ಬೈರಿಕಟ್ಟೆ- ಸ್ವಲಾತ್ ವಾರ್ಷಿಕ, ಸನ್ಮಾನ ಕಾರ್ಯಕ್ರಮ

ಕುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್ ಬೈರಿಕಟ್ಟೆ ಇದರ ಆಶ್ರಯದಲ್ಲಿ 11 ನೇ ಸ್ವಲಾತ್ ವಾರ್ಷಿಕ ಹಾಗೂ ಸನ್ಮಾನ ಕಾರ್ಯಕ್ರಮವು ಜನವರಿ 20-2024 ರಂದು ನಡೆಯಲಿದೆ.

ಮೂಡಂಬೈಲ್ ಬೈರಿಕಟ್ಟೆ ಮದ್ರಸ ವಠಾರದಲ್ಲಿ ರಾತ್ರಿ 8:00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಹು। ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಹು। ಅಬ್ದುರಹ್ಮಾನ್ ಲತೀಫಿ ಉಕ್ಕುಡ (ಸದರ್ ಮುಹಲ್ಲಿಂ Q.I.M ಮೂಡಂಬೈಲ್ ಬೈರಿಕಟ್ಟೆ), ಜ| CA ಅಬ್ದುಲ್ಲ ಮಾದುಮೂಲೆ (ಟ್ರಶರರ್ & ಸೆಕ್ರೆಟರಿ ಬೋರ್ಡ್ ಓಫ್ ಗವರ್ನರ್ ಇಂಡಿಯನ್ ಸ್ಕೂಲ್ ಅಬೂದಾಬಿ), ಜ। ಇಬ್ರಾಹಿಂ ಅಡ್ಡಸ್ತಳ (ಹಿರಿಯ ಪತ್ರ ಕರ್ತರು ವಾರ್ತಾ ಭಾರತಿ ಮಂಗಳೂರು), ಜ| ಅಂದುಂಞ ಬೈರಿಕಟ್ಟೆ (ಅಧ್ಯಕ್ಷರು G.M ಮೂಡಂಬೈಲ್ ಬೈರಿಕಟ್ಟೆ), ಜ। ಮುಹಮ್ಮದ್ ಹಾಜಿ ಮರಕ್ಕಣಿ (ಅಧ್ಯಕ್ಷರು ಬದರ್ ಹುಸೈನ್ ಜುಮಾ ಮಸೀದಿ ಮರಕ್ಕಣಿ), ಜ। ಶೆರೀಫ್ ಅಡ್ಯನಡ್ಕ (ಅಧ್ಯಕ್ಷರು ರಷ್ಯಾನಿಯಾ ಜುಮಾ ಮಸೀದಿ ಅಡ್ಯನಡ್ಕ) ಅಲ್ಲದೇ ಇತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ

ಅಲ್ಲದೇ ಇತರ ಉಲಮಾ ಉಮರಾ ನೇತಾರರು ಗಣ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆಂದು ಕುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್ ಬೈರಿಕಟ್ಟೆ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com