janadhvani

Kannada Online News Paper

ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್: ಯತೀಮ್ ಕುಟುಂಬಕ್ಕೆ ಮನೆ- ಕೀ ಹಸ್ತಾಂತರ ಕಾರ್ಯಕ್ರಮ

ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ) ಸಂಸ್ಥೆಯ ಅಧೀನದಲ್ಲಿ ದಾನಿಗಳ ಹಾಗೂ ಸಂಸ್ಥೆಯ ಸದಸ್ಯರ ಸಹಕಾರದಿಂದ ಮನೆಯ ಕೆಲಸಕಾರ್ಯ ಪೂರ್ಣಗೊಂಡು (27/08/2023)ಆದಿತ್ಯವಾರ ಆ ಕುಟುಂಬಕ್ಕೆ ಕೀ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬದ್ರುದ್ದೀನ್ ಉಳ್ಳಾಲ್, ಕಾರ್ಯದರ್ಶಿ ರಿಯಾಝ್ TMR, ಇಬ್ರಾಹಿಂ ನಂದಾವರ, ರಫೀಕ್ ತುಂಬೆ, ಅಲ್ತಾಫ್ ಟಿಪ್ಪುನಗರ, ಜಮಾಲ್ ಉಳ್ಳಾಲ್, ಅಬೂಬಕ್ಕರ್ ಉಳ್ಳಾಲ್. ಸಾಹಿದ್ ಸೂರಿಕುಮೇರ್, ಸಮೀರ್ ಝುಬೈರ್, ಸಲೀಂ ಮುರ, ಅಶ್ರಫ್ ಕಾಜೂರ್, ಶೌಕತ್ ಇಂದಬೆಟ್ಟು, ಸಬಾನಾ ಕವಾಲ್ಕಟ್ಟೆ, ಷರೀಫ್ ಕರ್ನಾಟಕ ಗ್ಲಾಸ್ & ವುಡ್ ಮಾಲೀಕರು, ಹೈದರ್ ಮಾಚಾರ್, ಸುಲೈಮಾನ್ ಬೆಲಾಲ್, ಮಾಚಾರ್ ಜಮಾಅತ್ ಅಧ್ಯಕ್ಷರು, ಮಾಚಾರ್ ಜಮಾಅತ್ ಖತೀಬ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

ಮನೆಯ ಉದ್ಘಾಟನೆ ಕಾರ್ಯಕ್ರಮ ಮಾಚಾರ್ ಜಮಾಅತ್ ಖತೀಬರು ಹಾಗೂ ಎಮರ್ಜೆನ್ಸಿ ಹೆಲ್ಪ್ ಲೈನ್ ಸಂಸ್ಥೆಯ ಅಧ್ಯಕ್ಷರಾದ ಬದ್ರುದ್ದೀನ್ ಉಳ್ಳಾಲ್ ರವರ ನೇತೃತ್ವದಲ್ಲಿ ನಡೆಯಿತು.

error: Content is protected !! Not allowed copy content from janadhvani.com