janadhvani

Kannada Online News Paper

ಕೆ ಸಿ ಎಫ್ ಅಬುಧಾಬಿ ವತಿಯಿಂದ ಗೌರವಾರ್ಪಣೆ

ಅಬುದಾಬಿ:- ಸೆಪ್ಟಂಬರ್ 10ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯಲಿರುವ ಎಸ್ಎಸ್ಎಫ್ (ಸುನ್ನೀ ಸ್ಟೂಡೆಂಟ್ ಫೆಡರೇಶನ್) ಇದರ 50ನೇ ವರ್ಷಾಚರಣೆಯ ಭಾಗವಾಗಿ ನಡೆಯುವ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಚಾರಾರ್ಥವಾಗಿ ಅಬುಧಾಬಿ ಕೆಸಿಎಫ್ ಹಮ್ಮಿಕೊಂಡ G-Meet ಎಂಬ ಕಾರ್ಯಕ್ರಮದ ವೇದಿಕೆಯಲ್ಲಿ ಜೀವನದ ಬಹುದೊಡ್ಡ ಭಾಗವನ್ನು ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಉನ್ನತಿಗಾಗಿ ಮುಡಿಪಾಗಿಟ್ಟು ಭಾರತದ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ರವರ ನಿರ್ದೇಶನದಂತೆ ತಮ್ಮ ಜೀವನವನ್ನು ಬಾಲ್ಯದಿಂದಲೇ ಸಮುದಾಯಕ್ಕಾಗಿ ಎಸ್ಎಸ್ಎಫ್ ಮೂಲಕ ಧಾರೆಯೆರೆದ ಹಿರಿಯರು, ಅಬುದಾಬಿ ಅನಿವಾಸಿಗಳು ಆದ ಬಹು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಹಾಗೂ ಪಿಎಂ ಅಬ್ದುಲ್ ಹಮೀದ್ ರವರಿಗೆ ಕೆಸಿಎಫ್ ಅಬುಧಾಬಿ ವತಿಯಿಂದ ಗೌರವ ಸಮರ್ಪಿಸಲಾಯಿತು.

ಈ ಸಮಯದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ, ಎಸ್ಎಸ್ಎಫ್ ಕರ್ನಾಟಕ ರಾಜ್ಯಾಧ್ಯಾಕ್ಷರಾದ ಬಹು ಸುಫಿಯಾನ್ ಸಖಾಫಿ ಹಾಗೂ ಕೆಸಿಎಫ್ ರಾಷ್ಟ್ರೀಯ ನೇತಾರರಾದ ಹಕಿಂ ತುರ್ಕಳಿಕೆ, ಕೆ.ಎಚ್.ಸಖಾಫಿ, ಕೆಸಿಎಫ್ ಅಬುಧಾಬಿ ಸಮಿತಿ ಅಧ್ಯಕ್ಷರಾದ ಹಸೈನಾರ್ ಅಮಾನಿ, ಪ್ರಧಾನ ಕಾರ್ಯದರ್ಶಿ ಕಬೀರ್ ಬಾಯಂಬಾಡಿ ಹಾಗೂ ಇನ್ನಿತರರು ಹಾಜರಿದ್ದರು.

error: Content is protected !! Not allowed copy content from janadhvani.com