janadhvani

Kannada Online News Paper

ಕೊಡಂಗಾಯಿ ಸುನ್ನೀ ಸೆಂಟರಿನಲ್ಲಿ ಸುನ್ನೀ ಸಂಘ ಕುಟುಂಬದ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ

77ನೇ ಸ್ವಾತಂತ್ರ್ಯ ದಿನಾಚರಣೆ-ಅಂಗವಾಗಿ ಇಂದು ಬೆಳಿಗ್ಗೆ ಕೊಡಂಗಾಯಿ ಸುನ್ನೀ ಸೆಂಟರ್ ಮುಂಭಾಗದಲ್ಲಿ ಅಲ್ ಮದರಸತುಲ್ ಖಿಲ್’ರಿಯ್ಯಾ ಕೊಡಂಗಾಯಿ ಅದ್ಯಾಪಕರಾದ ಅಬ್ಬಾಸ್ ಮದನಿ ಉಸ್ತಾದರ ನೇತೃತ್ವದಲ್ಲಿ ಸುನ್ನೀ ಸೆಂಟರ್ ಕಾರ್ಯದರ್ಶಿ CH ಮಹಮ್ಮದ್ ಮುಸ್ಲಿಯರ್ ಧ್ವಜಾರೋಹಣ ಮಾಡಿದರು.

ನಂತರ ಅದ್ಯಾಪಕರಾದ ಅಬ್ಬಾಸ್ ಮದನಿ ಉಸ್ತಾದರು ಸ್ವಾತಂತ್ರ್ಯಕ್ಕಾಗಿ ದುಡಿದ ಎಲ್ಲರನ್ನು ಸ್ಮರಿಸಿ ಅವರಿಗಾಗಿ ಪ್ರತ್ಯೇಕವಾಗಿ ಪ್ರಾರ್ಥಿಸಿದರು. ಮದ್ರಸ ಸಹ ಅದ್ಯಾಪಕರಾದ ಮುಸ್ತಫ ಝುಹ್ರಿ ಉಸ್ತಾದರು ನಾಡಿನ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಉತ್ತಮ ಸಂದೇಶವನ್ನು ನೀಡಿದರು ಈ ಸಂಭ್ರಮದಲ್ಲಿ ಮದ್ರಸದ ವಿದ್ಯಾರ್ಥಿಗಳು ಹಾಗೂ ಸುನ್ನೀ ಸೆಂಟರ್ ಪದಾಧಿಕಾರಿಗಳ ಸಹಿತ ಹಲವಾರು ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com