janadhvani

Kannada Online News Paper

ಡ್ರಗ್ಸ್ ವಿರುದ್ಧ ಅಭಿಯಾನ: ಸುನ್ನೀ ಸಂಘಟನೆಗಳ ಮುಖಂಡರಿಂದ ಪೋಲಿಸ್ ಆಯುಕ್ತರ ಭೇಟಿ

ಮಂಗಳೂರು:ಕರ್ನಾಟಕ ಮುಸ್ಲಿಂ ಜಮಾಅತ್
ಎಸ್ ವೈ ಎಸ್, ಎಸ್ ಎಸ್ ಎಫ್ ನ್ನೊಳಗೊಂಡ ಸುನ್ನಿ ಕೋ ಆರ್ಡಿನೇಷನ್ ಮಂಗಳೂರು ಝೋನ್ ಸಮಿತಿಯಿಂದ ಮಂಗಳೂರು ಕಮಿಷನರ್ ಕುಲದೀಫ್ ಕುಮಾರ್ ಆರ್ ಜೈನ್. ಐಪಿಎಸ್ ರವರನ್ನು ಭೇಟಿ ಮಾಡಿ ಡ್ರಗ್ಸ್ ವಿರುದ್ಧ ಅಭಿಯಾನದ ಬಗ್ಗೆ ಚರ್ಚಿಸಲಾಯಿತು.

ಮಂಗಳೂರು ಆಸುಪಾಸಿನ ಎಲ್ಲಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು,ಜನಪ್ರತಿನಿಧಿಗಳು ಸಾಮಾಜಿಕ , ಧಾರ್ಮಿಕ ,ಸಂಘಟನಾ ಪ್ರಮುಖ ನಾಯಕರನ್ನು ಆಹ್ವಾನಿಸಿ ಸಭೆಯನ್ನು ಕರೆಯಲು ವಿನಂತಿಸಲಾಯಿತು. ಅಲ್ಲದೆ ಆಗಸ್ಟ್ 19 ರಂದು ಮಂಗಳೂರಲ್ಲಿ ನಡೆಯುವ ಜನಜಾಗೃತಿ ಜಾಥಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲಾಯಿತು.

ಈ‌ ಸಂದರ್ಭದಲ್ಲಿ ಮಂಗಳೂರು ಝೋನ್ ಸುನ್ನೀ ಕೋ ಆರ್ಡಿನೇಷನ್ ಸಮಿತಿ ಅಧ್ಯಕ್ಷ ರಾದ ಹಾಫಿಝ್ ಯಾಕುಬ್ ಸಅದಿ ನಾವೂರು,ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ವಳವೂರು, ಎಸ್ ವೈ ಎಸ್ ಅಧ್ಯಕ್ಷ ಸತ್ತಾರ್ ಸಖಾಫಿ ಅಡ್ಯಾರ್ ಪದವು , ಪ್ರಧಾನ ಕಾರ್ಯದರ್ಶಿ ನಝೀರ್ ಲುಲು ಎಸ್ ಎಸ್ ಎಫ್ ಅಧ್ಯಕ್ಷ ಅಶ್ರಫ್ ಪಾಲಿಲಿ ಕಾರ್ಯದರ್ಶಿಗಳಾದ ಆಸಿಫ್ ಸಅದಿ ಅಡ್ಯಾರ್,
ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com