janadhvani

Kannada Online News Paper

ಬೇಂಗಿಲ ಜಮಾಅತ್ ಪ್ರವಾಸಿ ಸಂಘಟನೆ ಜಿ ಸಿ ಸಿ ಗಲ್ಫ್ ಗೈಸ್- ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಕರೀಮ್‌ ಲತೀಫಿ ಸೋಕಿಲ,ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್‌ ಬೊಳ್ಳಗುರಿ, ಕೋಶಾದಿಕಾರಿಯಾಗಿ ನಾಸಿರ್‌ ಹೆಚ್‌ ಆಯ್ಕೆ

ಉಪ್ಪಿನಂಗಡಿ: ಮುಹ್ಯುದ್ದೀನ್ ಜುಮಾ‌ ಮಸೀದಿ ಬೇಂಗಿಲ‌ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪ್ರವಾಸಿ ಸಂಘಟನೆ GCC ಗಲ್ಫ್ ಗೈಸ್ ಬೇಂಗಿಲ‌ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಸಂಘಟನೆಯ ನೂತನ ಅಧ್ಯಕ್ಷರಾಗಿ ಕರೀಮ್‌ ಲತೀಫಿ ಸೋಕಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್‌ ಬೊಳ್ಳಗುರಿ, ಕೋಶಾದಿಕಾರಿಯಾಗಿ ನಾಸಿರ್‌ ಹೆಚ್‌ ಆಯ್ಕೆಯಾಗಿದ್ದಾರೆ.

GCC ಗಲ್ಫ್ ಗೈಸ್ ಬೇಂಗಿಲ‌ ಇದರ ವಾರ್ಷಿಕ ಸಭೆ ಇತ್ತೀಚಿಗೆ ವಾಟ್ಸಪ್‌ ಗ್ರೂಪಿನಲ್ಲಿ ನಡೆಯಿತು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಇಸ್ಮಾಯಿಲ್‌ ಸಅದಿ ಕೆದಿಲ ಹಾಗೂ ಉಪಾಧ್ಯಕ್ಷರುಗಳಾಗಿ ಹೈದರ್‌ ಹೆಚ್‌, ಅನ್ಸಾರ್‌ ಬೇಂಗಿಲ ಆಯ್ಕೆಗೊಂಡರು. ಸಮಿತಿಯ ಕಾರ್ಯದರ್ಶಿಗಳಾಗಿ ಬದ್ರುದ್ದೀನ್‌ ಕುದ್ರಡ್ಕ ಹಾಗೂ ಶಿಹಾಬ್‌ ಹೆಚ್‌ ಆಯ್ಕೆಯಾದರು. ಲೆಕ್ಕಪರಿಶೋಧಕರಾಗಿ ಝಮೀಲ್‌ ಬೇಂಗಿಲ ಅವರನ್ನು ಆಯ್ಕೆ ಮಾಡಲಾಯಿತು.

ಸ್ವಲಾತ್‌ ಸಂಯೋಜಕರಾಗಿ ಹನೀಫ್‌ ಸಅದಿ ಹಾಗೂ ಸಂಚಾಲಕರಾಗಿ ನೌಶಾದ್‌ ಎಸ್‌, ಸ್ವಾದಿಕ್ ಎಸ್‌ ಆಯ್ಕೆಗೊಂಡರು. ಅಬ್ಬಾಸ್ ಮುಸ್ಲಿಯಾರ್ ಹೆಚ್‌, ಆದಂ ಬೊಳ್ಳಗುಳಿ, ಸಿದ್ದೀಕ್ ಸೋಕಿಲ, ರವೂಫ್ ಸೋಕಿಲ, ರಶೀದ್ ಬೇಂಗಿಲ, ಅಬ್ದುಲ್‌ ರಹ್ಮಾನ್ ಎನ್, ಇಬ್ರಾಹಿಂ ಎನ್ ಸಮಿತಿಯ ಸಲಹೆಗಾರರಾಗಿ ಆಯ್ಕೆಗೊಂಡರು.

ರಮಳಾನ್‌ ಎನ್‌ ಸಂಘಟನೆ ಕಾರ್ಯದರ್ಶಿಯಾಗಿ ಹಾಗೂ ತಾಜುದ್ದೀನ್‌ ಎನ್‌ ಮೀಡಿಯಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಸಮಿತಿಯ ಕಾರ್ಯಕಾರಣಿ ಸದಸ್ಯರಾಗಿ ಸಿನಾನ್ ಹೆಚ್‌, ಸಾಬಿತ್‌ ಹೆಚ್‌, ಸಫೀರ್‌ ಹೆಚ್‌, ಶೆರೀಫ್‌ ಎಮ್‌, ಇರ್ಫಾನ್‌ ಪಿ, ಕಾಸಿಂ ಬಿ, ಸಮದ್‌ ಬಿ, ಸಿದ್ದೀಕ್‌ ಎಸ್‌ ಹಾಗೂ ರಾಫಿ ಎಮ್‌ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ರಿಯಾಝ್‌ ಬೊಳ್ಳಗುರಿ ವಂದಿಸಿದರು.

error: Content is protected !! Not allowed copy content from janadhvani.com