janadhvani

Kannada Online News Paper

ಕಣ್ಣೂರಲ್ಲಿ ಸುನ್ನಿ ಕೋ ಆರ್ಡಿನೇಷನ್ ನಿಂದ Proactif-2023 ಪ್ರತಿನಿಧಿ‌ಸಮಾವೇಶ

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ,ಎಸ್ ವೈ ಎಸ್ ,ಎಸ್ ಎಸ್ ಎಫ್ ಸಂಘಟನೆಗಳನ್ನೊಳಗೊಂಡ ಸುನ್ನಿ ಕೋಆರ್ಡಿನೇಷನ್ ಮಂಗಳೂರು ಝೋನ್ ಸಮಿತಿಯಿಂದ ಜುಲೈ 16 ಆದಿತ್ಯವಾರ ಮಧ್ಯಾಹ್ನ 2.30 ಕ್ಕೆ ಅಲ್ ಮರ್ಕಝುಲ್ ಇಸ್ಲಾಮೀ ಅಡ್ಯಾರ್ ಕಣ್ಣೂರಲ್ಲಿ Proactif-2023 ಪ್ರತಿನಿಧಿ‌ ಸಮಾವೇಶವು ಸಮಿತಿಯ ಅಧ್ಯಕ್ಷರಾದ ಹಾಫಿಳ್ ಯಾಕೂಬ್ ಸಅದಿ ನಾವೂರು ರವರ ಅಧ್ಯಕ್ಷತೆಯಲ್ಲಿನಡೆಯಿತು.

ಕಾರ್ಯಕ್ರಮ ದಲ್ಲಿ ಸಯ್ಯಿದ್ ಇಸ್ಹಾಕ್ ತಂಞಲ್ ಕಣ್ಣೂರು ದಿನ ನೆರವೇರಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ‌ಝೋನ್ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ವಳವೂರು ಉದ್ಘಾಟಿಸಿದರು.

ಸಂಘ ಶಕ್ತಿ ಎಂಬ ವಿಷಯದಲ್ಲಿ ಬಹು ಬಷೀರ್ ಮದನಿ ಅಲ್ ಕಾಮಿಲ್ ಕುಳೂರು ನಮ್ಮ ಮುಂದಿನ ಹೆಜ್ಜೆ ಎಂಬ ವಿಷಯದಲ್ಲಿ ಬಹು ಯಾಕುಬ್ ಸ ಅದಿ ಅಲ್ ಅಫ್ಳಲಿ
ಸಂಘಟನೆ ಮತ್ತು ಆರ್ಥಿಕತೆ ಎಂಬ ವಿಷಯದ ಲ್ಲಿ
ಬಹು ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ತರಗತಿ ನಡೆಸಿದರು.

ಬಹು ಸತ್ತಾರ್ ಸಖಾಫಿ . ಅಡ್ಯಾರ್ ಪದವು ಅಧ್ಯಕ್ಷರು ಎಸ್ ವೈ ಎಸ್ ಮಂಗಳೂರು ಝೋನ್, ‌ಬಹು ಮುಹಮ್ಮದ್ ಅಶ್ರಫ್ ಫಾಳಿಲಿ ಅಮ್ಮೆಮ್ಮಾರ್ ಅಧ್ಯಕ್ಷರು SSF ಮಂಗಳೂರು ಡಿವಿಷನ್, ಜನಾಬ್ ಅಬ್ದುಲ್ ರಹಿಮಾನ್ ಅಧ್ಯಕ್ಷರು ‌ಎಸ್ ಎಂ ಎ ಮಂಗಳೂರು ರೀಜನಲ್
ಜನಾಬ್ ಬಿ ಎ ಅಬ್ದುಲ್ ಸಲೀಂ ಅಡ್ಯಾರ್ ಕೋಶಾಧಿಕಾರಿ ಸುನ್ನಿ ಕೋ ಆರ್ಡಿನೇಷನ್ ಮಂಗಳೂರು ಝೋನ್ ಎ. ಪಿ ಇಸ್ಮಾಯಿಲ್ ಅಡ್ಯಾರ್ ಪದವು ಮಾತನಾಡಿದರು.

ಜನಾಬ್ ಕೆ ಎಚ್ ಕೆ ಕರೀಂ ಹಾಜಿ ಅಡ್ಯಾರ್,
ಬಹು ನವಾಝ್ ಸಖಾಫಿ ಅಡ್ಯಾರ್ ಪದವು,
ಬಹು ಮನ್ಸೂರ್ ಮದನಿ ವಳವೂರು,
ಜನಾರ್ ಅಹ್ಮದ್ ಬಷೀರ್‌ ಪಂಜಿಮೊಗರು,
ಜನಾಬ್ ಅಬ್ಬಾಸ್ ಹಾಜಿ ಬಿಜೈ,
ಜನಾಬ್ ಕೆ ಎಚ್ ಬಾವಾ ಕಾವೂರು,ಜನಾಬ್ ಇಕ್ಬಾಲ್ ವಳವೂರು, ಜನಾಬ್ ಖಲಂದರ್ ಪಾಂಡೇಶ್ವರ, ಅಬ್ದುಲ್ ಹಮೀದ್ ಬೆಂಗರೆ, ಜನಾಬ್ ಆದಂ ಸಲಾಂ ತುಂಬೆ ,ಜನಾಬ್ ಅಬ್ಬುಲ್ ಖಾದರ್ ಕಾವೂರು,ಜನಾಬ್ ಉನೈಸ್ ಪೆರಿಮಾರ್, ಜನಾಬ್ ಹಸನ್ ಪಾಂಡೇಶ್ವರ, ಜನಾಬ್ ಜಬ್ಬಾರ್ ಕಣ್ಣೂರು, ಕೆ ಸಿ ಸುಲೈಮಾನ್ ಮುಸ್ಲಿಯಾರ್,ಉಪಸ್ಥಿತರಿದ್ದರು.

ಕೋ ಆರ್ಡಿನೇಷನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಸ್ವಾಗತಿಸಿದರು. ನಝೀರ್ ಲುಲು ವಳವೂರು ವಂದಿಸಿದರು.

error: Content is protected !! Not allowed copy content from janadhvani.com