janadhvani

Kannada Online News Paper

ಮೀನು ಮಾರಾಟ ಸಂಘದ ಅಧ್ಯಕ್ಷ ಸಿ.ಎಂ.ಮುಸ್ತಾಫಾ ನಿಧನ- ಮುಸ್ಲಿಮ್ ಒಕ್ಕೂಟ ಸಂತಾಪ

ಮಂಗಳೂರು ಸೆಂಟ್ರಲ್ ಮುಸ್ಲಿಮ್ ಕಮಿಟಿ, ಮುಸ್ಲಿಮ್ ಒಕ್ಕೂಟ ಮುಖ್ಯ ಪದಾಧಿಕಾರಿ, ಮಂಗಳೂರು ಧಕ್ಕೆ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟ್ ಸಂಘದ ಅಧ್ಯಕ್ಷ, ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಆದ ಸಿ.ಎಂ. ಮುಸ್ತಾಫಾ ರವರು ಇಂದು ಬೆಳಿಗ್ಗೆ 4.00 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಂಗಳೂರು ಬಂದರ್ ನಿವಾಸಿಯಾದ ಇವರು ಹೃದಯ ಸಂಬಂಧಿ ಚಿಕಿತ್ಸೆಗಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರ ಮಗ್ಫಿರತ್ ಗಾಗಿ ದುವಾ ಮಾಡಬೇಕಾಗಿ ವಿನಂತಿಸುತ್ತಾ ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇವರು ಮುಸ್ತಾಫಾ ಅವರ ನಿಧನಕ್ಕೆ ಸಂತಾಪ ವ್ಯಕ್ತಡಿಸಿದ್ದಾರೆ.

.

error: Content is protected !! Not allowed copy content from janadhvani.com