janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ವೆಸ್ಟ್ ಜಿಲ್ಲಾ ಅಧ್ಯಕ್ಷರಾಗಿ ಬಿ ಎಂ ಮಮ್ತಾಝ್ ಅಲಿ ಆಯ್ಕೆ

ಮಂಗಳೂರು: ಕರ್ನಾಟಕದಲ್ಲಿ ಮುಸ್ಲಿಮರ ಶೈಕ್ಷಣಿಕ, ಔದ್ಯೋಗಿಕ, ಧಾರ್ಮಿಕ ಹಾಗೂ ಸಾಮಾಜಿಕ ‌ನಾಯಕರನ್ನೊಳಗೊಂಡ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿ ಮಹಾಸಭೆಯು ಸುನ್ನಿ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಅಧ್ಯಕ್ಷ ತೆಯಲ್ಲಿ ಜರಗಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಐ ಅಬೂಸುಫ್ಯಾನ್ ಇಬ್ರಾಹಿಮ್ ಮದನಿ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಕಳೆದ ಅವಧಿಯ ವರದಿ ಲೆಕ್ಕ ಪತ್ರ ಮಂಡನೆಯ ನಂತರ ನೂತನ ಸಮಿತಿಗೆ ರೂಪು ನೀಡಲಾಯಿತು. ಅಧ್ಯಕ್ಷ ರಾಗಿ ಬಿ ಎಂ ಮಮ್ತಾಝ್ ಅಲಿ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹೀಮ್ ಸಅದಿ ಕತ್ತರ್, ಕೋಶಾಧಿಕಾರಿ ಯಾಗಿ ಎಸ್ ಕೆ ಅಬ್ದುಲ್ ಖಾದರ್ ಹಾಜಿ ಮುಡಿಪು ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಲಿಕುಂಞ ಹಾಜಿ ಪಾರೆ,ಮುಹಮ್ಮದ್ ಹನೀಪ್ ಬಜಪೆ ಕಾರ್ಯದರ್ಶಿ ಗಳಾಗಿ ಅಬ್ದುಲ್ ಜಲೀಲ್ ಬ್ರೈಟ್ , ಬಿ ಎ ಇಕ್ಬಾಲ್ ಕೃಷ್ಣಾಪುರ, ಎನ್ ಎಸ್ ಉಮರ್ ಮಾಸ್ಟರ್, ಎಸ್ ಎಮ್ ಬಷೀರ್ ಹಾಜಿ‌ ಮಿತ್ತಬೈಲ್ , ಸಲೀಂ ಅಹ್ಮದ್ ಅಡ್ಯಾರ್ ಪದವು, ಎಂಕೆಎಂ ಇಸ್ಮಾಯಿಲ್ ಕಿನ್ಯ.

ಸದಸ್ಯರುಗಳಾಗಿ ಅಶ್ರಫ್ ಕಿನಾರ ಮಂಗಳೂರು,ಕೆಕೆಎಂ ಕಾಮಿಲ್ ಸಖಾಫಿ,ಎನ್ ಎಸ್ ಕರೀಂ , ಅಬ್ದುಲ್ ರವೂಪ್ ಬಜಾಲ್ , ಬಿಜಿ ಹನೀಪ್ ಹಾಜಿ ಉಳ್ಳಾಲ,ಕೆ ಇ ಸಾಲೆತ್ತೂರು, ಎಂಇ ಸಿದ್ದೀಖ್ ಸಖಾಫಿ ಮೂಳೂರು,ಅಬ್ದುಲ್ ಹಮೀದ್ ಹಮೀದ್ ಸುರತ್ಕಲ್, ಜಿ ಅಹ್ಮದ್ ಬಷೀರ್ ಗಾಣೆಮಾರ್ ಅಮ್ಮುಂಜೆ , ಕೆ ಎಂ ಮುಹಮ್ಮದ್ ಪಾರೂಖ್ ಕೋಟೆಪುರ,ಇಸ್ಮಾಯಿಲ್ ಕೆಎಸ್ ಆರ್ ಟಿಸಿ, ಅನ್ವರ್ ಹಾಜಿ ಗೂಡಿನಬಳಿ,ಎ ಎಂ ಇಸ್ಮಾಯಿಲ್ ಸಅದಿ ಉರುಮಣೆ,ಕೆಎಚ್ ಕರೀಂ ಹಾಜಿ ಕಣ್ಣೂರು,, ಎ ಪಿ ಇಸ್ಮಾಯಿಲ್ ಅಡ್ಯಾರ್,ಲುಕ್ಮಾನಿಯ್ಯ ಇಸ್ಮಾಯಿಲ್ ಮುಸ್ಲಿಯಾರ್ ಕೃಷ್ಣಾಪುರ,ಸಿತಾರ್ ಮುಹಮ್ಮದ್ ಹಾಜಿ ಕೈಕಂಬ,ಅಬ್ದುಲ್‌ ಲತೀಫ್ ಕೆರೆಬಳಿ, ಮುಹಮ್ಮದ್ ಸಾಮನಿಗೆ ಮದನಿ,, ಎಂಎ ಬಷೀರ್ ಮುಡಿಪು, ಬಿ ಎಚ್ ಇಸ್ಮಾಯಿಲ್ ಕೋಮರಂಗಲ ಅಬ್ಬಾಸ್ ಪೂಮಣ್ಣು, ಅಬ್ದುರ್ರಹ್ಮಾನ್ ಹಾಜಿ ಪ್ರಿಟೆಂಕ್ ಕೃಷ್ಣಾಪುರ, ಸುಹ್ಲೈ ಲ್ ಪರಂಗಿಪೇಟೆ ಇವರನ್ನು ಆರಿಸಲಾಯಿತು. ರಾಜ್ಯ ನಾಯಕ ಸಾದಿಖ್ ಮಾಸ್ಟರ್ ಸ್ವಾಗತಿಸಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com