janadhvani

Kannada Online News Paper

ನಾಳೆ ಮಂಚಿಯಲ್ಲಿ ಶೈಖುನಾ ತಾಯಕ್ಕೋಡು ಉಸ್ತಾದ್ ಅನುಸ್ಮರಣೆ

ಬಂಟ್ವಾಳ:ಮದನೀಸ್ ಅಸೋಸಿಯೇಷನ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಸುದೀರ್ಘ ನಾಲ್ಕು ದಶಕಕ್ಕೂ ಮಿಕ್ಕ ಪ್ರೊಫೆಸರಾಗಿ ಸೇವೆಸಲ್ಲಿಸಿದ ಶೈಖುನಾ ತಾಯಕ್ಕೋಡು ಉಸ್ತಾದರ ಅನುಸ್ಮರಣೆ ಸಂಗಮ ನಾಳೆ(2022 ಮಾರ್ಚ್ 22 ಮಂಗಳವಾರ) ಬೆಳಿಗ್ಗೆ 10 ಗಂಟೆಗೆ ಮುಹಮ್ಮದೀಯ ಜುಮಾ ಮಸ್ಜಿದ್ ಮಂಚಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು ಸಲೀಂ ಮದನಿ ಬೈರಿಕಟ್ಟೆ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶೈಖುನಾ ಮಂಚಿ ಉಸ್ತಾದ್ ಮಾಡಲಿದ್ದಾರೆ.
ಅನುಸ್ಮರಣೆ ಭಾಷಣ ಶೈಖುನಾ ಜಪ್ಪು ಉಸ್ತಾದ್ ಮಾಡಲಿದ್ದಾರೆ.ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಬಂಟ್ವಾಳ ಮದನೀಸ್ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com