janadhvani

Kannada Online News Paper

ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ ತೀರ್ಪು ಯಾವ ಆಧಾರದ ಮೇಲೆ- ಇಕ್ಬಾಲ್ ಬಾಳಿಲ

ಇದು ಸಂವಿಧಾನ ವಿರುದ್ದದ ಹೇಳಿಕೆಯಾಗಿವೆ

ಹಿಜಾಬ್ ವಿಷಯದಲ್ಲಿ ಇಂದು ನೀಡಿದ ತೀರ್ಪಿನಲ್ಲಿ ದು:ಖವಿದೆ.
ಆದರೂ ಕಾನೂನನ್ನು ಗೌರವಿಸಿ ತೀರ್ಪಿಗೆ ಮೌನಿಯಾಗಿದ್ದೇವೆ.
ಮೇಲ್ಮನವಿ ಮೂಲಕ ಮುಂದುವರಿದು ಕಾನೂನಾತ್ಮಕವಾಗಿ ನ್ಯಾಯ ತಂದುಕೊಡಲಿದ್ದೇವೆ ಎಂದು SKSSF ನಾಯಕ ಇಕ್ಬಾಲ್ ಬಾಳಿಲ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ತೀರ್ಪು ನೀಡಿ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿರುವುದು ಸಂವಿಧಾನ ವಿರೋಧ ಹೇಳಿಕೆಯಾಗಿರುತ್ತದೆ.
ಮತ್ತು ಹೀಗೆ ಹೇಳಲು ಕಾರಣವನ್ನು ಹೈಕೋರ್ಟ್ ಸಮಾಜದ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ.
ಶಿರವಸ್ತ್ರ ಧರಿಸುವುದು ಇಸ್ಲಾಮಿನ ಮೂಲಭೂತ ಹಕ್ಕುಗಳಾಗಿರುತ್ತದೆ. ಹಾಗೂ ಕಡ್ಡಾಯ ಕೂಡಾ ಆಗಿರುತ್ತದೆ.
ಈ ಬಗ್ಗೆ ಪರಿಶುದ್ದ ಖುರ್‌ಆನಿನಲ್ಲೇ ಉಲ್ಲೇಖ ಇರುವಾಗ ನ್ಯಾಯಲಯವು ಅವಿಭಾಜ್ಯ ಅಂಗವಲ್ಲ ಎಂದು ಹೇಳಲು ಕಾರಣವೇನು.?
ನಾಳೆ ಹೀಗೆ ಮುಂದುವರಿದು ಎಲ್ಲಿಯೂ ಹಿಜಾಬ್ ಧರಿಸಬಾರದು ಎಂದು ಹೇಳಿದರೂ ಅಚ್ಚರಿಪಡಬೇಕಾಗಿಲ್ಲ.
ಈ ಕುರಿತು ಸಮುದಾಯದ ಉಲಮಾ ಉಮರಾ ನಾಯಕರು ಒಗ್ಗಟ್ಟಾಗಿ ನಿಂತು ನ್ಯಾಯ ಒದಗಿಸಲು ಮುಂದಾಗಬೇಕಿದೆ.
ಪ್ರಬುದ್ದತೆಯಿಂದ ಎದುರಿಸಿ ಸಂವಿದಾನವನ್ನು ಉಳಿಸಲು ಪ್ರತಿಜ್ಞರಾಗಬೇಕಿದೆ ಎಂದು SKSSF ಟ್ರೆಂಡ್ ರಾಜ್ಯ ನಾಯಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.