ಕಲ್ಲಡ್ಕ: ತಾಜುಲ್ ಉಲಮಾ ಮದ್ರಸ ಬೋಳಂತೂರು, ನಾರಂಕೊಡಿ ಇದರ ಆಶ್ರಯದಲ್ಲಿ
ತಾಜುಲ್ ಉಲಮಾ,ನೂರುಲ್ ಉಲಮಾ, ಶಂಸುಲ್ ಉಲಮಾ,ಸುರಿಬೈಲ್ ಉಸ್ತಾದ್ ಹಾಗೂ P. A ಉಸ್ತಾದ್ ಅನುಸ್ಮರಣೆ ಹಾಗೂ ಮದನಿಯಂ ಮಜ್ಲಿಸ್ ಕಾರ್ಯಕ್ರಮವು ದಿನಾಂಕ 20 ಫೆಬ್ರವರಿ 2022ಕ್ಕೆ ಕಲ್ಲಡ್ಕ ಸಮೀಪದ ಬೋಳಂತೂರು ನಾರಂಕೊಡಿಯಲ್ಲಿ ನಡೆಯಲಿದೆ.
ಸಂಜೆ 4:30 ಕ್ಕೆ ಅನುಸ್ಮಾರಣೆ ಕಾರ್ಯಕ್ರಮವು ನಡೆಯಲಿದ್ದು
6:30 ಕ್ಕೆ ಮದನಿಯಂ ಅಬ್ದುಲ್ ಲತೀಫ್ ಸಖಾಫಿ ರವರ ನೇೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಅಸ್ಸೆಯ್ಯದ್ ಇಬ್ರಾಹಿಂ ಪೂಕುಂಞಿ ತಂಙಳ್ ಉದ್ಯಾವರ, ಅಸ್ಸೆಯದ್ ಹಾಮಿದ್ ಅಸ್ಸಖಾಪ್ ತಂಙಳ್ ನಾದಪುರಂ, ಅಸಯ್ಯದ್ ಶಿಯಬುದ್ದಿನ್ ತಂಙಳ್ ಮದಕ, ಮಂಚಿ ಉಸ್ತಾದ್, ಮೌಲಾನ ಶಾಫಿ ಸಅದಿ ಬೆಂಗಳೂರು (ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು) , C.H ಮಹಮ್ಮದಾಲಿ ಸಖಾಫಿ ದಾರುಲ್ ಅಶ್ ಅರಿಯ್ಯ, C.M ಅಬೂಬಕ್ಕರ್ ಲತಿಫೀ ಎಣ್ಮೂರು, ಅಲ್-ಹಾಜ್ ಸುಲೈಮಾನ್ ಮುಸ್ಲಿಯಾರ್ ನಾರ್ಶಾ, ಸುಲೈಮಾನ್ ಸಖಾಫಿ ಬೋಳಂತೂರು, ಹಮೀದ್ ಮದನಿ ನಾರಂಕೊಡಿ ಹಾಗೂ ಇನ್ನಿತರ ಉಲಮಾ ಉಮಾರ ನೇತಾರರು ಭಾಗವಹಿಸುವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿದೆ ಎಂದು ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮಹಮ್ಮದ್ ಮಜೀದ್ ಕದ್ಕರ್ ತಿಳಿಸಿದ್ದಾರೆ.







