janadhvani

Kannada Online News Paper

ಕೈಕಂಬ – ಫೆಬ್ರವರಿ 8 ರಂದು ಮುಲ್ತಖಲ್ ಉಲಮಾ ಸಂಗಮ

ಕೈಕಂಬ – ಸುನ್ನೀ ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಇದರ ಆಶ್ರಯದಲ್ಲಿ ವಿದ್ವಾಂಸರಿಗಾಗಿ ಮುಲ್ತಖಲ್ ಉಲಮಾ ಎಂಬ ವಿಶೇಷ ತರಗತಿಯು ಫೆಬ್ರವರಿ 8 ಮಂಗಳವಾರ ಪೂರ್ವಾಹ್ನ 9.30 ರಿಂದ ಮಧ್ಯಾಹ್ನ 1.00 ರ ತನಕ ಮೆಗಾ ಪ್ಲಾಝಾ ದಲ್ಲಿ ನಡೆಯಲಿದೆ.

ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಅಧ್ಯಕ್ಷರೂ ,ಅಸಾಸ್ ಸಂಸ್ಥೆಯ ಸಾರಥಿಯೂ ಆದ ಮೌಲಾನಾ ಅಶ್ರಫ್ ಸಅದಿ ಮಲ್ಲೂರು ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಾಹಗಳು ಮತ್ತು ವಿವಾದಗಳು ಹಾಗೂ ವಿದ್ವಾಂಸರು ಎಂಬ ವಿಷಯದಲ್ಲಿ ಜಾಮಿಯ ಸ-ಅದಿಯ ಅರಬಿಯ ಇದರ ಪ್ರಾಂಶುಪಾಲರೂ , ಪ್ರಮುಖ ವಿದ್ವಾಂಸರೂ ಆದ ಶೈಖುನಾ K.K ಉಸ್ತಾದ್ ವಯನಾಡ್ ಮತ್ತು ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿಯೂ ,ಪ್ರಮುಖ ವಾಗ್ಮಿಯೂ ಆದ ಮೌಲಾನಾ ಹುಸೈನ್ ಸಅದಿ ಕೆ. ಸಿ ರೋಡ್ ಸೆಮಿನಾರ್ ಮಂಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಜಂಇಯ್ಯತುಲ್ ಉಲಮಾ ಬಜ್ಪೆ ಝೋನ್ ಇದರ ಪ್ರಧಾನ ಕಾರ್ಯದರ್ಶಿ ಕೆ ಹೆಚ್ ಯು ಶಾಫಿ ಮದನಿ ಕರಾಯ ತಿಳಿಸಿದ್ದಾರೆ.