janadhvani

Kannada Online News Paper

ಸುಳ್ಯದಲ್ಲಿ ಎಸ್ಸೆಸ್ಸೆಫ್ ರಾಜ್ಯ ಅರ್ಧವಾರ್ಷಿಕ ಕೌನ್ಸಿಲ್ ರಿವ್ಯೂ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ನ ಅರ್ಧವಾರ್ಷಿಕ ಕೌನ್ಸಿಲ್ ರಿವ್ಯೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗರವರ ಅಧ್ಯಕ್ಷತೆಯಲ್ಲಿ ದಾರುಲ್ ಹುದಾ ಬೆಳ್ಳಾರೆಯಲ್ಲಿ ನಡೆಯಿತು.

ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಕೌನ್ಸಿಲನ್ನು ಉದ್ಘಾಟನೆ ಮಾಡಿದರು.ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷರಾದ ಡಾ ಮಹಮ್ಮದ್ ಫಾರೂಕ್ ನಈಮಿ ತರಗತಿಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ದಾರುಲ್ ಹುದಾ ಬೆಳ್ಳಾರೆ ಸಂಸ್ಥೆಯ ಮ್ಯಾನೇಜರ್ ಖಲೀಳ್ ಹಿಮಮಿ ಸಖಾಫಿ,ಸ್ವಾಗತ ಚಯರ್ಮ್ಯಾನ್ ಹಮೀದ್ ಅಲ್ಫ,ಕನ್ವೀನರ್ ಸಂಶುದ್ದೀನ್ ಝಂಝಂ, ಕೋಶಾಧಿಕಾರಿ ಇಬ್ರಾಹಿಂ,ಸದಸ್ಯರಾದ ಅಯ್ಯೂಬ್ ಟಿ.ಎಂ,ಮಹ್ಮೂದ್ ಶಾಹಿನ್ ಮಾಲ್,ಸಿದ್ದೀಖ್ ಕಟ್ಟೆಕ್ಕಾರ್,ಸಿದ್ದೀಖ್ ಹಿಮಮಿ ಪೈಂಬಿಚ್ಚಾಲ್, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ,ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕಾರ್ಯದರ್ಶಿಗಳಾದ ಕೆ.ಎಂ ಮುಸ್ತಫಾ ನಈಮಿ, ಹುಸೈನ್ ಸಅದಿ ಹೊಸ್ಮಾರ್,ಸಫ್ವಾನ್ ಚಿಕ್ಕಮಂಗಳೂರು, ಶರೀಫ್ ಕೊಡಗು,ಮುಬಶ್ಶಿರ್ ಅಹ್ಸನಿ ಕೊಡಗು,ಎನ್.ಸಿ ರಹೀಂ ಹೊಸ್ಮಾರ್,ವಾಜಿದ್ ಹಾಸನ,ನವಾಝ್ ಭಟ್ಕಳ, ಹಕೀಂ ಬೆಂಗಳೂರು ಹಾಗೂ ರಾಜ್ಯ ನಾಯಕರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ಕೊನೆಗೆ ವಂದಿಸಿದರು.