janadhvani

Kannada Online News Paper

SYS ಗುಂಡುಕಲ್ಲು ಬ್ರಾಂಚ್: ನೂತನ ಪದಾಧಿಕಾರಿಗಳು

SYS ಗುಂಡುಕಲ್ಲು ಬ್ರಾಂಚ್ ಇದರ ವಾರ್ಷಿಕ ಸಭೆ ಹಾಗೂ ನೂತನ ಸಮಿತಿ ಪಧಾದಿಕಾರಿಗಳಾದ ಆಯ್ಕೆ ಮಸ್ಜಿದುಲ್ ಅನ್ಸ್ವಾರ್ ಗುಂಡುಕಲ್ಲಿನಲ್ಲಿ ನಡೆಯಿತು.
ಪ್ರಸ್ತುತ ಸಭಾಧ್ಯಕ್ಷತೆಯನ್ನು ಮೂಡಬಿದ್ರೆ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ಉಸ್ತಾದ್ ವಹಿಸಿ ದುಅಃ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಬೂಬಕರ್ ಸಿದ್ದೀಕ್ ಸಖಾಫಿ ಉದ್ಘಾಟಿಸಿದರು. ಎಂ.ಎ ಅಬ್ದುಲ್ ಖಾದರ್ ರವರು ಸ್ವಾಗತಿಸಿ ವರದಿ ವಾಚಿಸಿದರು. ಮೂಡಬಿದ್ರೆ SYS ಮೂಡಬಿದ್ರೆ ಸೆಂಟರ್ ನಾಯಕರಾದ ಪಿ.ಎಚ್ ಉಸ್ಮಾನಾಕ ಕೆರೆಬಳಿ, ಇಬ್ರಾಹಿಮ್ ಅಪೂರ್ವ ನಗರ, ಅಬ್ದುಲ್ ಜಬ್ಬಾರ್ ಮೂಡಬಿದ್ರೆ ವೀಕ್ಷಕರಾಗಿ ಭಾಗವಹಿಸಿದ್ದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಎಂ.ಎಚ್ ಉಸ್ಮಾನಾಕ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಎಂ.ಎಚ್ ಮೈಯದ್ದಿ, ದಅವಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸಅದಿ , ಇಸಾಬ ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದೀಕ್ ಸಖಾಫಿ ಉಪಾಧ್ಯಕ್ಷರಾಗಿ ಮುಹಮ್ಮದಾಕ ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.