janadhvani

Kannada Online News Paper

ನೆಕ್ಕರೆ ಮಸ್ಜಿದುಲ್ ಬಾರಿ ಜುಮಾ ಮಸ್ಜಿದ್: ಮಾಜಿ ಅಧ್ಯಕ್ಷರು ನಿಧನ

ಆಲಂಕಾರು / ನೆಕ್ಕರೆ,ಜೂ.24: ಮಸ್ಜಿದುಲ್ ಬಾರಿ ಜುಮಾ ಮಸ್ಜಿದ್ ನೆಕ್ಕರೆ ಇದರ ಮಾಜಿ ಅಧ್ಯಕ್ಷರೂ ಜಮಾ ಅತ್ ನ ಹಿರಿಯ ಧುರೀಣ ಎಸ್ ವೈ ಎಸ್ ಕುಂತೂರು ಶಾಖೆಯ ಸದಸ್ಯರಾದ ಲತೀಫ್ ಮದನಿ, ಬಶೀರ್, ತಾಜ್ ಮುಹಮ್ಮದ್, ಅಝೀಜ್ ರವರ ತಂದೆ ಜನಾಬ್ ಸಿ ಕೆ ಅಬೂಬಕ್ಕರ್ ರವರು ನಿನ್ನೆ ರಾತ್ರಿ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿರುತ್ತಾರೆ.

ಸೌಮ್ಯ ಮತ್ತು ಸವಿನಯ ಸ್ವಭಾವದ ಅಬೂಬಕ್ಕರ್ ಅವರು ಜಮಾಅತ್ ನಲ್ಲಿ ಸುದೀರ್ಘ ಅವಧಿಗೆ ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಪೂರ್ತಿ ಜಮಾಅತ್ ಗೆ ಮಾದರಿ ವ್ಯಕ್ತಿಯಾಗಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಬಳಗದಲ್ಲಿ ಒಬ್ಬರಾದರು.

ಮೃತರ ಆಗಲಿಕೆಗೆ ಜಮಾಅತ್ ನ ಎಲ್ಲಾ ಸದಸ್ಯರೂ, ಎಸ್ ವೈ ಎಸ್ ಕುಂತೂರು ಘಟಕದ ಪಧಾಧಿಕಾರಿಗಳು ಮತ್ತು ಸದಸ್ಯರು ಕಂಬನಿ ಮಿಡಿದಿದ್ದು ಅವರ ಕಬರನ್ನು ಅಲ್ಲಾಹು ಸ್ವರ್ಗೋದ್ಯಾನದಲ್ಲಿ ಒಂದು ಗೂಡಿಸಲಿ ಆಮೀನ್ ಯಾ ಅಲ್ಲಾಹ್.

ಮೃತರ ಹೆಸರಿನಲ್ಲಿ ಎಲ್ಲರೂ ತಹ್ಲೀಲ್ ಮತ್ತು ಖುರ್ಆನ್ ಪಾರಾಯಣ ಮಾಡಲು ಅಪೇಕ್ಷಿಸಲಾಗಿದೆ.