ಉಡುಪಿ,ಜೂ.01: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಅಧೀನ ಇಂದಿನಂದ ಜೂನ್ 5 ರವರೆಗೆ 5 ದಿನದ Raide-21 ಕಾರ್ಯಕ್ರಮವು ರಾತ್ರಿ 9 ಗಂಟೆಗೆ ಝೂಂ ಮೂಲಕ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ಲತೀಫ್ ಸ’ಅದಿ ಶಿವಮೊಗ್ಗ ರವರು ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೇರಳ ರಾಜ್ಯ ಮಾಜಿ ಅಧ್ಯಕ್ಷರಾದ ಸಿ.ಕೆ ರಾಶಿದ್ ಬುಖಾರಿಯವರು “ಆದರ್ಶದೊಂದಿಗೆ ಮಾದರಿ ನಾಯಕ” ಎಂಬ ವಿಷಯದಲ್ಲಿ, ಕೇರಳ ಕಣ್ಣೂರು ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರಾದ ಅನಸ್ ಅಮಾನಿ ತಳಿಪರಂಬು “ಸುನ್ನೀ ಅಗ್ರಗಣ್ಯ ನಾಯಕತ್ವ”, ಕರ್ನಾಟಕ ರಾಜ್ಯ ಫಿನಾನ್ಸ್ ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ” ಕಾರ್ಯಕರ್ತ ಅಂದರೆ ಹೇಗೆ”, ಕರ್ನಾಟಕ ರಾಜ್ಯ ಕಾರ್ಯದರ್ಶಿ ನೌಫಳ್ ಸಖಾಫಿ ಕಳಸ “ಓ ಯುವ ಸಮೂಹವೇ ನಾಳಿನ ರಕ್ಷೆಗಾಗಿ”, ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಸ್ತುವಾರಿಯಾದ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ “ಜವಾಬ್ದಾರಿ ಮತ್ತು ಕಾರ್ಯತಂತ್ರ” ಎಂಬ ಚರ್ಚಾ ವಿಷಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದು ಜಿಲ್ಲಾ ಪ್ರ.ಕಾರ್ಯದರ್ಶಿ ವರದಿ ಜಿಲ್ಲಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.







