ಪುತ್ತೂರು ಕಮ್ಯುನಿಟಿ ಸೆಂಟರ್ ಮೂಲಕ ಸರಕಾರಿ ಪ್ರೌಡ ಶಾಲೆ ಕೊಂಬೆಟ್ಟುವಿನಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಆಯೋಜಿಸಲಾಗಿತ್ತು.

ರಫೀಕ್ ಮಾಸ್ಟರ್ ರವರು ನಡೆಸಿಕೊಟ್ಟ ಕಾರ್ಯಾಗಾರದಲ್ಲಿ 268 ವಿಧ್ಯಾರ್ಥಿಗಳು ಭಾಗವಹಿಸಿದರು. ಕುಂಬ್ರ ಪ್ರೌಡ ಶಾಲೆಯಲ್ಲಿ ಪರೀಕ್ಷಾ ತಯಾರಿ ಬಗ್ಗೆ ಮೌಲಾನಾ ಆಝಾದ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ತೌಫೀಕ್ (ಬಿ.ಎಡ್. ಎಂ.ಎ ಎಕಾನಮಿಕ್ಸ್) ರವರು ಮಾರ್ಗದರ್ಶನ ನೀಡಿದರು. ಕಳೆದ ಒಂದು ವಾರದಿಂದ ಸುಮಾರು 680 ವಿಧ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.
ಪುತ್ತೂರು ತಾಲೂಕು ಶಿಕ್ಷಣಾಧಿಕಾರಿ ಶ್ರೀಯುತ ಲೋಕೇಶ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ.







