ಸದಾ ಫ್ಯಾಸಿಸ್ಟರ ಆಶಯಗಳನ್ನೇ ಜನರೆಡೆಯಲ್ಲಿ ಬಿತ್ತುವ ದ್ವೇಷ ಸಾರುವ ಮಾಧ್ಯಮಗಳು ಒಂದೊಂದಾಗಿ ತಲೆಯೆತ್ತುತ್ತಿರುವಾಗ ಪ್ರಜ್ಞಾವಂತ ಪ್ರಜೆಗಳಾಗಿ ಅದರ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯವಾಗಿದೆ. ಹೇಗಾದರೂ ಟಿಆರ್ಪಿ ಗಳಿಸಬೇಕು ದುಡ್ಡು ಮಾಡಬೇಕು ಎಂಬ ದುರಾಸೆ ಭಾರತವನ್ನು ಇಂಚಿಂಚಾಗಿ ಕೊಲ್ಲುತ್ತಿದೆ, ಈಗ ಭಾರತವನ್ನು ಉಳಿಸಿ ನೀಚ ಮಾಧ್ಯಮಗಳನ್ನು ಅಳಿಸಬೇಕಿದೆ.
ಕರ್ನಾಟಕದಲ್ಲಿ ಕನ್ನಡಿಗನಿಗೆ ಅವಮಾನವಾಗಿರುವ ಮಾಧ್ಯಮವೆಂದರೆ ಅದು ‘ಸುವರ್ಣ ನ್ಯೂಸ್’ ಅದರಲ್ಲೂ ಅದರ ನಿರೂಪಕ ‘ಸುಳ್ಳ್ ಕಕ್ಕನವರ್’. ದಿನಕ್ಕೊಂದು ಬಾರಿ ಧರ್ಮ, ಜಾತಿಗಳ ಮಧ್ಯೆ ದ್ವೇಷದ ಚರ್ಚೆ ನಡೆಸದೇ ಮಲಗದ ಕೀಳುಜಾತಿ ಇವರದ್ದು. ಇಂತಹವರ ವಿರುದ್ಧ ಈಗ ನಾವು ಧ್ವನಿ ಎತ್ತಬೇಕಿದೆ ಕನ್ನಡಿಗರ ಅಭಿಮಾನ ಉಳಿಸಲು ಇಂತಹವರನ್ನು ಅಳಿಸಬೇಕಿದೆ.
ಸತ್ಯ ತೋರಿಸುವ ಮಾಧ್ಯಮಗಳನ್ನು ಬಹಿಷ್ಕರಿಸುವ ಕೀಳು ಸರ್ಕಾರ ಧೈರ್ಯವಿದ್ದರೆ ಇಂತಹವರನ್ನು ಬಹಿಷ್ಕರಿಸಿ ಜೈಲಿಗಟ್ಟಬೇಕೆಂದು ‘ಟ್ವಿಟ್ಟರ್’ ಮೂಲಕ ಸರ್ಕಾರ ಹಾಗೂ ಸುಳ್ಳಿನ ಮಾಧ್ಯಮಗಳಿಗೆ ಎಚ್ಚರಿಕೆಯ ಡೋಳು ಬಾರಿಸುವ.
ಆದ್ದರಿಂದ ಪ್ರತಿಯೊಬ್ಬ ಧರ್ಮ ಜಾತಿಗಳನ್ನು ದೂರವಿಟ್ಟು ಭಾರತೀಯ ಪ್ರಜೆಯಾಗಿ ಈ ಅಭಿಯಾನದಲ್ಲಿ ಕೈ ಜೋಡಿಸುವ ಇದೇ ಭಾನುವಾರ,(18/10/2020) 4.00pm ರಿಂದ 6.00pm ವರೆಗೆ ಇಂತಹ ಮಾಧ್ಯಮಗಳ ವಿರುದ್ಧ ಟ್ವೀಟ್ ನಡೆಸುವ.
ಸ್ಟೂಡೆಂಟ್ ಯೂತ್ ಮುವ್ಮೆಂಟ್
ಕರ್ನಾಟಕ






