SSF ಕಲ್ಲಡ್ಕ ಸೆಕ್ಟರ್ ವತಿಯಿಂದ ಶೈಖುನಾ ಖಾಝಿ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮವು ದಿನಾಂಕ 3/10/2020 ಶನಿವಾರ ಮಗ್ರಿಬ್ ನಮಾಝಿನ ಬಳಿಕ ಇಬ್ರಾಹಿಂ ಸುರಿಬೈಲ್ ರವರ ಮನೆಯ ಅಂಗಳದಲ್ಲಿ ಮಜೀದ್ ಕದ್ಕರ್ ಅಧ್ಯಕ್ಷರು SSF ಕಲ್ಲಡ್ಕ ಸೆಕ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

SSF ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ರಶೀದ್ ಹನೀಫಿ ಅಶ್ – ಅರಿಯ್ಯ ಮೌಲಿದ್ ಮಜ್ಲಿಸ್ ಗೆ ನೇತೃತ್ವ ನೀಡಿದರು. DS ಅಬ್ದುಲ್ ರಹ್ಮಾನ್ ಮದನಿ ತಾಳಿತ್ತನೂಜಿ ಅನುಸ್ಮರಣಾ ಪ್ರಭಾಷಣ ಮಾಡಿದರು. ಮುಹಮ್ಮದಾಲಿ ಸಖಾಫಿ ಅಶ್ – ಅರಿಯ್ಯ ಬದ್ರುದ್ದೀನ್ ಹಾಜಿ ಕುಕ್ಕಾಜೆ ಆಶಂಸ ಭಾಷಣ ಮಾಡಿದರು.

ವೇದಿಕೆಯಲ್ಲಿ ಅಕ್ಬರ್ ಅಲಿ ಮದನಿ ಅಲಂಪಾಡಿ , ಸಾಲಿಂ ಸಅದಿ ಅಲ್ – ಅಫ್ಳಲಿ ಸುನ್ನೀ ಮಹಲ್ , ಯೂಸುಫ್ ಮದನಿ ಅಶ್ – ಅರಿಯ್ಯ , ಅಶೀಬುರ್ರಹ್ಮಾನ್ ಮದನಿ ಕೆ.ಪಿ ಬೈಲ್ , ಇಬ್ರಾಹಿಂ ಕರೀಂ ಕದ್ಕರ್, ಹಂಝ ಮಂಚಿ, ರಫೀಕ್ ಮಾಡದ ಬಳಿ, ಫಾರೋಕ್ ಬಿ.ಜಿ ಅಶ್ರಫ್ ನಾರ್ಶ, ದಾವೂದಾಕ ಕಲ್ಲಡ್ಕ ಉಪಸ್ಥಿತರಿದ್ದರು. ಮುಹಮ್ಮದ್ ಅಲಿ ಮದನಿ ಸೆರ್ಕಳ ಸ್ವಾಗತಿಸಿ ವಂದಿಸಿದರು.
ವರದಿ ಹಮೀದ್ ಕದ್ಕರ್






