janadhvani

Kannada Online News Paper

ಮುಸ್ಲಿಂ ಜಮಾಅತ್ ನಿಂದ ಆಯುಷ್ಮಾನ್ ಮಾಹಿತಿ ಕಾರ್ಯಾಗಾರ

ಉಡುಪಿ: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ತಾಲೂಕು ಮಟ್ಟದ ಆಯುಷ್ಮಾನ್ ಕಾರ್ಡ್ ಹಾಗೂ ಸಾಂಘಿಕ ಕಾರ್ಯಾಗಾರವು ಆಗಸ್ಟ್ 25 ಮಂಗಳವಾರ ಕಾರ್ಕಳ, ಕಾಪು, ಉಡುಪಿ ತಾಲೂಕುಗಳಲ್ಲೂ 27 ರಂದು ಗುರುವಾರ ಕುಂದಾಪುರ, ಬೈಂದೂರು ತಾಲೂಕುಗಳಲ್ಲೂ ಹಾಗೂ 29 ರಂದು ಶನಿವಾರ ಬ್ರಹ್ಮಾವರ ತಾಲೂಕುನಲ್ಲೂ ನಡೆಯಲಿದೆ.

ರಾಜ್ಯ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಸೆಕ್ರೇಟ್ರೀಯೇಟ್ ಹಮ್ಮಿಕೊಂಡ
ತಾಲೂಕು ಮಟ್ಟದ ಈ ಕಾರ್ಯಾಗಾರದಲ್ಲಿ ಕೋವಿಡ್- 19 ಸುನ್ನೀ ಹೆಲ್ಪ್ ಡೆಸ್ಕ್ ತಂಡವನ್ನು ಹಾಗೂ ವಿಪತ್ತುಗಳ ಸಂರಕ್ಷಣಾ ತಂಡವನ್ನೂ ರಚಿಸಲಾಗುವುದು.

ಈ ಕಾರ್ಯಾಗಾರದಲ್ಲಿ ಎಸ್ ಜೆ.ಎಮ್.ಎಸ್ ವೈ ಎಸ್. ಎಸ್ಸೆಸ್ಸೆಫ್ ಹಾಗೂ ಎಸ್ ಡಿ ಐ ನಾಯಕರು ಭಾಗವಹಿಸಿಸಲಿರುವರು
ಜಿಲ್ಲಾ ನಾಯಕರಾದ ಮೌಲಾನಾ ನಝೀರ್ ಅಝ್ಹರಿ, ಹಾಜಿ ಅಬೂಬಕ್ಕರ್ ನೇಜಾರು.ಬಿ.ಎಮ್ ಮೊಯ್ದಿನ್ ಉಡುಪಿ, ಬಿಎಸ್ಎಫ್ ರಫೀಕ್ ಕುಂದಾಪುರ, ಮುಹಮ್ಮದ್ ಗೌಸ್ಕ ಕಾರ್ಕಳ, ಅಡ್ವಕೆಟ್ ಹಂಝತ್ ಹೆಜಮಾಡಿ, ಅಡ್ವಕೆಟ್ ಇಲ್ಯಾಸ್ ನಾವುಂದ,ಇಂಜಿನಿಯರ್ ನಾಸಿರ್ ಶೇಖ್ ಬೈಲೂರು, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ವೈ ಬಿ ಸಿ ಬಶೀರ್ ಅಲಿ ಮೂಳೂರು,ಸುಬ್ಹಾನ್ ಅಹ್ಮದ್ ಹೊನ್ನಾಳ ಕೆ ಎಸ್ ಎಮ್ ಮನ್ಸೂರ್ ಉಡುಪಿ ಹಾಗೂ ಮತ್ತಿತರ ನಾಯಕರು ಈ ಕಾರ್ಯಾಗಾರದ ನೇತೃತ್ವವನ್ನು ವಹಿಸಲಿರುವರು.