ಕೆಸಿಎಫ್ ದುಬೈ ನೋರ್ತ್ ಝೋನ್ ಆಡಳಿತ ವಿಭಾಗ ಅಧ್ಯಕ್ಷರೂ ವಿವಿಧ ಸಂಘ ಸಂಸ್ಥೆಗಳ ಯುಎಇ ಯ ಸಕ್ರಿಯ ನಾಯಕರೂ ಆದ ಮುಹಮ್ಮದ್ ಶಕೂರ್ ಮನಿಲಾ ಅವರ ತಾಯಿ ಖದೀಜಮ್ಮ ಪರ್ಯಾಲ್ತಡ್ಕ ಇದೀಗ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ನಿಧನ ಹೊಂದಿದರು.
ಕೆಸಿಎಫ್ ಯುಎಇ ಸಮಿತಿಯು ತೀವ್ರ ಸಂತಾಪ ಸೂಚಿಸಿದ್ದು ಮೃತರ ಹೆಸರಿನಲ್ಲಿ ಎಲ್ಲಾ ಕಾರ್ಯಕರ್ತರು ಪ್ರಾರ್ಥನೆ ಮತ್ತು ತಹ್ಲೀಲ್ ಸಮರ್ಪಣೆ, ಖುರ್’ಆನ್ ಪಾರಾಯಣ ಮಾಡಲು ಮತ್ತು ಅವರ ಮಗ್ಫಿರತ್ ಗಾಗಿ ಪ್ರಾರ್ಥಿಸಬೇಕೆಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






