janadhvani

Kannada Online News Paper

ಬೆಂಗಳೂರು ಸಅದಿಯ್ಯಾ: ಅಬುಧಾಬಿ ಸಮಿತಿಯ ನೂತನ ಸಾರಥಿಗಳು

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಅರಿವಿನ ಕ್ರಾಂತಿ ಸೃಷ್ಟಿಸುತ್ತಿರುವ ಸ ಅದಿಯ್ಯಾ ಸಂಸ್ಥೆಯ ಅಬುಧಾಬಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಹಕೀಂ ತುರ್ಕಳಿಕೆ,ಉಪಾಧ್ಯಕ್ಷರುಗಳಾಗಿ ಹಸೈನಾರ್ ಅಮಾನಿ ಅಜ್ಜಾವರ, ಮುಸ್ತಫಾ ನಾಳ, ಹಾಫಿಲ್ ಸಯೀದ್ ಹನೀಫಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಕೋಟೆಕಾರ್, ಕೋಶಾಧಿಕಾರಿಯಾಗಿ ಕೆ.ಹೆಚ್ ಮುಹಮ್ಮದ್ ಕುಂಞಿ ಸಖಾಫಿ, ಕಾರ್ಯದರ್ಶಿಗಳಾಗಿ ಕಬೀರ್ ಬಾಯಂಬಾಡಿ, ಉಮರ್ ಈಶ್ವರಮಂಗಲ, ಸಿದ್ದೀಕ್ ಎನ್.ಕೆ, ಖಾದರ್ ನಾಳ, ಫಾರೂಕ್ ಜಾರಿಗೆಬೈಲ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಡಾ. ಶೇಖ್ ಬಾವ, ಹಮೀದ್ ಸಅದಿ, ಪಿ.ಎಂ ಅಬ್ದುಲ್ ಹಮೀದ್, ಇಕ್ಬಾಲ್ ಕುಂದಾಪುರ ಮುಂತಾದವರನ್ನು ಸ ಅದಿಯ್ಯಾ ಯುಎಇ ಸಮಿತಿಗೆ ಆರಿಸಲಾಯಿತು. ಸಂಸ್ಥೆಯ ಸಾರಥಿ ಮೌಲಾನ ಶಾಫಿ ಸ ಅದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಹೊಸ ಯೋಜನೆಗಳನ್ನು ಹಮ್ಮಿ ಕೊಳ್ಳಲಾಯಿತು.