ದುಬೈ : ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ರವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಅಲ್ ಖಾದಿಸ ಎಜ್ಯುಕೇಶನಲ್ ಅಕಾಡೆಮಿ ಕಾವಳಕಟ್ಟೆ ಇದರ ದುಬೈ ಹಾಗೂ ಶಾರ್ಜಾ ಸಮಿತಿಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಮೆಹ್ಫಿಲೇ ತ್ವೈಬಾ ಮೀಲಾದ್ ಸಮಾವೇಶವು ನವಂಬರ್ 1 ಶುಕ್ರವಾರ ಸಂಜೆ 7ಗಂಟೆಗೆ ಬರ್ ದುಬೈ ಹಾಲಿಡೇ ಇನ್ ಸಭಾಂಗಣದಲ್ಲಿ ನಡೆಯಲಿದೆ.
ಅಲ್ ಖಾದಿಸ ಸಂಸ್ಥೆಯ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ಹಾಫಿಲ್ ಮುಹಮ್ಮದ್ ಸುಫ್ಯಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದು,ಸಾಮೂಹಿಕ ವಿವಾಹಗಳ ರೂವಾರಿ, ಪ್ರಖ್ಯಾತ ವಾಗ್ಮಿಯು, SYS ನೀಲಗಿರಿ ಜಿಲ್ಲಾಧ್ಯಕ್ಷರು ಆಗಿರುವ ದೇವರ್ಶೋಲ ಡಾ!ಅಬ್ದುಸ್ಸಲಾಂ ಮುಸ್ಲಿಯಾರ್ ಹುಬ್ಬುರ್ರಸೂಲ್ ಭಾಷಣ ಮಾಡಲಿದ್ದಾರೆ.ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಹಾಜಿ ಅಡ್ಯಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಲ್ ಮಯಾಸ ಮ್ಯಾನೇಜಿಂಗ್ ಡೈರೆಕ್ಟರ್ ಜನಾಬ್ ಮುಹಮ್ಮದ್ ಶರೀಫ್ ಸಾಹೇಬ್ ಮೂಡುಬಿದಿರೆ, ಪೆಟ್ರೋ ಸೆಲೂಷನ್ ಡೈರೆಕ್ಟರ್ ಮತೀನ್ ಅಹ್ಮದ್ ಚಿಲ್ಮಿ, ಅಲ್ ಖಾದಿಸ ದಮಾಮ್ ಸಮಿತಿ ಅಧ್ಯಕ್ಷ ಅಲ್ ಹಾಜ್ ರೈಸ್ಕೋ ಅಬೂಬಕ್ಕರ್ ಪಡುಬಿದ್ರಿ, ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲ್ ಹಾಜ್ ಡಾ.ಶೈಖ್ ಬಾವ ಅಬುಧಾಬಿ, ಜನಾಬ್ ಅಸ್ಟರ್ ಬಶೀರ್ ಹಾಜಿ ಬಂಟ್ವಾಳ ಸಹಿತ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಸಲೀಂ ಜೌಹರಿ ಕೊಲ್ಲಂ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಹಾಗೂ ಮಾಸ್ಟರ್ ಸಲೀಂ ಖಾದ್ರಿ ಉಜಿರೆ ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿದೆಯೆಂದು ಅಲ್ ಖಾದಿಸ ದುಬೈ ಸಮಿತಿ ಅಧ್ಯಕ್ಷರಾದ ಬಶೀರ್ ಬೊಳುವಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಲ್ ಖಾದಿಸ ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ,ಅಲ್ ಖಾದಿಸ ಶಾರ್ಜಾ ಸಮಿತಿ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ, ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಅಲ್ ಹಾಜ್ ಅಶ್ರಫ್ ಅಡ್ಯಾರ್, ದುಬೈ ಸಮಿತಿ ಕೋಶಾಧಿಕಾರಿ ಅಲಿ ಕೂಳೂರು,ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಬಶೀರ್ ಕೋಟೇಶ್ವರ,ಅಲ್ ಖಾದಿಸ ಸಮಿತಿ ಸದಸ್ಯರಾದ B.T.ಲತೀಫಿ ಉಸ್ತಾದ್,ಶಾಜಿದ್ ಬಜ್ಪೆ,ರಫೀಕ್ ಜೆಪ್ಪು ಅಲ್ ಖಾದಿಸ ಯುಎಇ ಓರ್ಗನೈಸರ್ ಖಲಂದರ್ ರಝ್ವಿ ಬೆಜ್ಜವಳ್ಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






