janadhvani

Kannada Online News Paper

ಎಸ್‌.ವೈ.ಎಸ್. ಬನ್ನೂರು ಶಾಖೆ: ವಾರ್ಷಿಕ ಸಭೆ

ಪುತ್ತೂರು: ಎಸ್‌.ವೈ.ಎಸ್. ಬನ್ನೂರು ಬ್ರಾಂಚ್ ಇದರ ವಾರ್ಷಿಕ ಸಭೆಯು ಸೆ.21 ರಂದು ಬನ್ನೂರು ಸುನ್ನೀ ಸೆಂಟರ್‌‌ನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ, ಉಪಾಧ್ಯಕ್ಷರಾಗಿ ಉಮರ್ ತಂಙಳ್ ಬನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಮುಸ್ಲಿಯಾರ್,ಕೋಶಾಧಿಕಾರಿಯಾಗಿ ಪಿ.ಪಿ. ಆದಂ ಹಾಜಿ ಪಡೀಲ್, ಜೊತೆ ಕಾರ್ಯದರ್ಶಿಗಳಾಗಿ ಫಾರೂಕ್ ಬನ್ನೂರು, ಸ್ವಾದಿಕ್ ಬನ್ನೂರು ಆಯ್ಕೆಯಾದರು.

ಟೀಂ ಇಸಾಬ ಅಮೀರ್ ಇಕ್ಬಾಲ್ ಬಪ್ಪಳಿಗೆ, ಎಸ್‌.ವೈ.ಎಸ್. ಪುತ್ತೂರು ಸೆಂಟರ್ ಕಾರ್ಯದರ್ಶಿ ಸ್ವಾಲಿಹ್ ಮುರ, ಶಾಹುಲ್ ಹಮೀದ್ ಕಬಕ ಸಹಿತ ಬನ್ನೂರಿನ ಎಸ್.ವೈ.ಎಸ್ ಬ್ರಾಂಚ್ ನ ಸದಸ್ಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.