
1973 ಎಪ್ರಿಲ್ 29 ಎಸ್ಸೆಸ್ಸೆಫ್ ಕೇರಳ ಮಣ್ಣಲ್ಲಿ ಜನ್ಮ ತಾಳಿದ ದಿನ ಅಂದರೆ SSF ಸ್ಥಾಪನಾ ದಿನ. ರಾಷ್ಟ್ರಮಟ್ಟದಲ್ಲಿ ಗೋಲ್ಡನ್ ಜುಬಿಲಿ ಆಚರಿಸುವ ಹೊಸ್ತಿಲಲ್ಲಿದೆ.1989 ಸೆಪ್ಟಂಬರ್ 19 ರಂದು ಕರ್ನಾಟಕದಲ್ಲಿ ರೂಪುಗೊಂಡ SSF ಇವತ್ತು ಮಹತ್ತರವಾದ ಹತ್ತಲವಾರು ಸಾಧನೆಗಳನ್ನು ಮಾಡುವಲ್ಲಿ ಸಫಲವಾಗಿದೆ. ಈ ನಿಟ್ಟಿನಲ್ಲಿ SSF ಉಜಿರೆ ಶಾಖೆಯಲ್ಲಿ ದ್ವಜ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ಹಾಗೂ ದುಃಆವನ್ನು SSF ಕರ್ನಾಟಕ ರಾಜ್ಯ ಪ್ರಥಮ ಉಪಾಧ್ಯಕ್ಷರು ಹಾಗೂ ಬೆಳ್ತಂಗಡಿ ಸಂಯುಕ್ತ ಜಮಾಅತಿನ ಅಧ್ಯಕ್ಷರು ಆದ ಸಯ್ಯಿದ್ ಇಸ್ಮಾಯಿಲ್ ಅಲ್’ಹಾದಿ ಮದನಿ ತಂಙಳ್, ಉಜಿರೆ ನೆರವೇರಿಸಿದರು. SSFನ ಕುರಿತು ಖ್ಯಾತ ಭಾಷಣಕಾರ ಉಸ್ಮಾನ್ ಜೌಹಾರಿ,ನೆಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M ಕೋಯ ತಂಙಳ್, SYS ನಾಯಕರಾದ ಹುಸೈನ್ ತಂಙಳ್ ಕುಂಟಿನಿ,ಅಶ್ರಫ್ KCF,ಹಾರಿಸ್ AtoZ,ಅಶ್ರಫ್ M.H,ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆ ಅಧ್ಯಕ್ಷರಾದ ಅಸಿಫ್ ಅತ್ತಾಜೆ,ಅಲ್ ಬುಖಾರಿ ಮಸ್ಜಿದ್ ಕುಂಟಿನಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ,ಅಲ್-ಅಮೀನ್ ಯಂಗ್’ಮೆನ್ಸ್ ಮಾಜಿ ಅಧ್ಯಕ್ಷರಾದ ಸಲೀಂ, SSF ಉಜಿರೆ ಸೆಕ್ಟರ್ ಪ್ರತಿನಿಧಿಗಳಾದ ಶಾಕಿರ್ ಹಾಗೂ ಮುಸ್ತಫಾ ಉಜಿರೆ ಹಾಗೂ ಯುನಿಟ್ ಕಾರ್ಯಕರ್ತರು ಭಾಗವಹಿಸಿದ್ದರು.
ಹಾರಿಸ್ AtoZ ಸ್ವಾಗತಿಸಿದರು,ಅಶ್ರಫ್ KCF ಕೊನೆಯಲ್ಲಿ ವಂದಿಸಿದರು.
ವರದಿ:ಎಂ.ಎಂ.ಉಜಿರೆ






