janadhvani

Kannada Online News Paper

ದಾರುಲ್ ಇರ್ಷಾದ್,ತ್ವಾಯಿಫ್ ಸಮಿತಿಯಿಂದ ಮಾಸಿಕ ಸ್ವಲಾತ್ ಮಜ್ಲಿಸ್

ತ್ವಾಯಿಫ್ :ದಾರುಲ್ ಇರ್ಷಾದ್ ಮಾಣಿ ಇದರ ತ್ವಾಯಿಫ್ ಕಮಿಟಿ ವತಿಯಿಂದ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಆ,21ರಂದು ಉಮರ್ ಮದನಿ ಕಾಮಿಲ್ ಸಖಾಫಿ ಪರಪ್ಪು ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸೌದಿಯಿಂದ ಉದ್ಯೋಗ ತೊರೆದು ಊರಿಗೆ ತೆರಳುತ್ತಿರುವ ದಾರುಲ್ ಇರ್ಷಾದ್ ಮಾಣಿ ತ್ವಾಯಿಫ್ ಕಮಿಟಿ ಇದರ ಅಧ್ಯಕ್ಷರಾದ ಸುಲೈಮಾನ್ ತೊಡಾರ್ ಹಾಗೂ ಕೋಶಾಧಿಕಾರಿ ಮುಹಮ್ಮದ್ ಹನೀಫ್ ಬಂದಿಯೋಡ್ ಅವರಿಗೆ ಶಾಲು ಹೊದಿಸಿ ಗೌರವಿಸಿ ಬೀಳ್ಕೊಡಲಾಯಿತು.

ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹನೀಫಿ ಹಿಮಮಿ ಕುಂಡಡ್ಕ ಉಸ್ತಾದರನ್ನು ಹಾಗೂ ನೂತನ ಕೋಶಾಧಿಕಾರಿಯಾಗಿ ಅಶ್ರಫ್ ಮಂಡಕೊಲು ಅವರನ್ನು ನೇಮಿಸಲಾಯಿತು.