janadhvani

Kannada Online News Paper

ಜಲ ಪ್ರವಾಹ: ಪ್ರತ್ಯೇಕ ಪ್ರಾರ್ಥನೆಗೆ ಮುಮ್ತಾಝ್ ಅಲಿ ಮನವಿ

ಮಂಗಳೂರು.ಆ,9:ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ.ಕೆಲವೊಂದು ಊರುಗಳು ಪ್ರವಾಹದಲ್ಲಿ ನಲುಗಿ ಹೋಗಿದೆ. ವಯಸ್ಕರೂ ಮಕ್ಕಳೂ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನವಹಿಸಬೇಕು.

ನದಿ ತೋಡು ಮುಂತಾದ ನೀರು ಹೆಚ್ಚಾಗಿರುವ ಕಡೆ ಸ್ನಾನ ಮಾಡಲು ಹೋಗದಿರಿ.ಸರಕಾರದ ನಿರ್ದೇಶನಗಳನ್ನು ಪಾಲಿಸಿರಿ.ಪ್ರಕೃತಿ ದುರಂತಗಳಿಂದ ರಕ್ಷೆ ಹೊಂದಲು ಎಲ್ಲರೂ ಪ್ರತ್ಯೇಕವಾಗಿ ಪ್ರಾರ್ಥಿಸಿರಿ.

ಬಿಎಂ ಮುಮ್ತಾಝ್ ಅಲಿ
ಪ್ರಧಾನ ಕಾರ್ಯದರ್ಶಿ : ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲೆ