ವೆಲ್ಲಿಂಗ್ಟನ್ : ನ್ಯೂಝಿಲೆಂಡ್ ನಲ್ಲಿ ಮುಸ್ಲಿಮ್ ಮಸೀದಿಗಳ ವಿರುಧ್ಧ ನಡೆದ ಭೀಕರ ದಾಳಿಯ ಹಿನ್ನಲೆಯಲ್ಲಿ ಅಲ್ಲಿನ ಮುಸ್ಲಿಮರನ್ನು ಸಾಂತ್ವನ ಪಡಿಸಿ,ಧನಾತ್ಮಕ ಮತ್ತು ಅನುಕರಣೀಯ ಹೆಜ್ಜೆಯನ್ನಿಟ್ಟ ಪ್ರಧಾನ ಮಂತ್ರಿ ಜಸಿಂತ ಆರ್ಡೇನ್ ಅವರಿಗೆ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಳುಹಿಸಿದ ಪತ್ರವನ್ನು ಹಸ್ತಾಂತರಿಸಲಾಯ್ತು.
ನ್ಯೂಝಿಲೆಂಡ್ ಪಾರ್ಲಿಮೆಂಟ್ ಸಭೆಯಲ್ಲಿ ಲೇಬರ್ ಪಾರ್ಟಿ ಎಂ.ಪಿ. ಗ್ರೆಗ್ ಒಕೋರನ್ನರ್ ಪ್ರಧಾನ ಮಂತ್ರಿಗೆ ಪತ್ರವನ್ನು ಹಸ್ತಾಂತರಿಸಿದರು.
ಯುಎಇ ಯ ನ್ಯೂಝಿಲೆಂಡ್ ರಾಯಬಾರಿ ಮಾತ್ಯು ಹೋಕಿನ್ಸ್ ಮೂಲಕ ಈ ಪತ್ರವನ್ನು ಕಳುಹಿಸಲಾಗಿತ್ತು.

ಮುಸ್ಲಿಮರು ಆಘಾತಕ್ಕೊಳಗಾಗಿದ್ದ ಸಂದರ್ಭದಲ್ಲಿ ಅವರೊಲ್ಲಬ್ಬರಂತೆ ಧೈರ್ಯ ತುಂಬಿ, ಭಯೋತ್ಪಾದಕರ ಎಲ್ಲಾ ಯೋಜನೆಗಳನ್ನು ನಿರ್ನಾಮ ಮಾಡಿದ ನ್ಯೂಝಿಲೆಂಡ್ ಸರ್ಕಾರದ ನಿರ್ಧಾರವನ್ನು ಗ್ರಾಂಡ್ ಮುಫ್ತಿ ಪತ್ರದಲ್ಲಿ ಪ್ರಶಂಸಿಸಿದ್ದರು.
ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯಿರುವ ದೇಶಗಳಲ್ಲೊಂದಾದ ಭಾರತದ ಗ್ರ್ಯಾಂಡ್ ಮುಫ್ತಿಯವರು ಕಳುಹಿಸಿದ ಪತ್ರ ನೋಡಿ ಅತಿಯಾದ ಸಂತೋಷವಾಯಿತೆಂದೂ, ಪತ್ರದಲ್ಲಿ ಉಲ್ಲೇಖಿಸಲಾದ ಮೆಷಿನ್ ಗನ್’ಗಳ ನಿಷೇಧ ಸಹಿತ ಎಲ್ಲಾ ಕಾರ್ಯಗಳನ್ನು ಕಾನೂನುಬದ್ಧವಾಗಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ಜೆಸಿಂತಾ ಹೇಳಿದರು.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ