janadhvani

Kannada Online News Paper

ಹುಬ್ಬಳ್ಳಿಯಲ್ಲಿ ಹಿಂದ್ ಸಫರ್ ಸ್ವಾಗತ ಸಮಾವೇಶ

ಹುಬ್ಬಳ್ಳಿ: ರಾಷ್ಟ್ರೀಯ SSF ನಾಯಕರ ಹಿಂದ್ ಸಫರ್ ಗೆ ಹುಬ್ಬಳ್ಳಿಯಲ್ಲಿ ಇಂದು ಉಜ್ವಲ ಸ್ವಾಗತ ಕೋರಲಾಯಿತು.
ಗಬ್ಬೂರು ವ್ರತ್ತದಿಂದ ದಫ್, ಸ್ಕೌಟ್ ಮತ್ತು ಬೈಕ್ ರಾಲಿಯೊಂದಿಗೆ ಬರಮಾಡಿ ಕೊಂಡ ಸಫರ್ ಗೆ ಹ.ದೀವಾನ್ ಶಾಹ್ ದರ್ಗಾ ವಠಾರದಲ್ಲಿ ಬ್ರಹತ್ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು.

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಸಮಾರಂಭ ಉದ್ಘಾಟನೆ ಗೈದರು.
ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶೌಕತ್ ನಈಮೀ ಬುಖಾರಿ, ಪ್ರ.ಕಾರ್ಯದರ್ಶಿ ಕೆ.ಎಂ. ಸಿದ್ದೀಖ್ M.A. ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತ ಎಂಬ ವಿಷಯದಲ್ಲಿ ಸಂದೇಶ ಭಾಷಣ ಮಾಡಿದರು.
SYS ಧಾರವಾಡ ಜಿಲ್ಲಾ ಒ್ರ.ಕಾರ್ಯದರ್ಶಿ ಉವೈಸ್ ಮಂಝರೀ ಶುಭಾಶಯ ಕೋರಿದರು.

SSF ರಾಜ್ಯ ಕಾರ್ಯದರ್ಶಿ ಕೆ.ಎಮ್. ಮುಸ್ತಫಾ ನಈಮೀ ಹಿಮಮೀ ಹಾವೇರಿ ಸ್ವಾಗತ ಕೋರಿ ಕೊನೆಯಲ್ಲಿ ಧನ್ಯವಾದವಿತ್ತರು.

SSF ಧಾರವಾಡ ಜಿಲ್ಲಾಧ್ಯಕ್ಷ ಮುಸ್ತಫಾ ಝುಹ್ರೀ, ಹನೀಫ್ ಸಖಾಫಿ, ಖಲೀಲ್ ನ ಈಮೀ, ಗದಗ ಜಿಲ್ಲಾ SSF ಉಪಾಧ್ಯಕ್ಷ ಉಮರ್ ಸ ಅದಿ,ರಶೀದ್ ಮುಸ್ಲಿಯಾರ್ , ಹು.ಧಾ. ಅಂಜುಮನ್ ಅಧ್ಯಕ್ಷ ಹಮೀದ್ ಕೊಪ್ಪದ್, ಪ್ರ.ಕಾರ್ಯದರ್ಶಿ ಜಮಾಲುದ್ದೀನ್ ಹಡಗಲಿ ಮುಂತಾದವರು ಉಪಸ್ಥಿತರಿದ್ದರು.