ಮಂಗಳೂರು: ನರೇಂದ್ರ ಮೋದಿ ಯವರು ತಮ್ಮ ಪಕ್ಷದ ಸೋಲಿನ ಹತಾಶೆಯಿಂದ ದೇಶದ ಸಂಪತ್ತನ್ನು ಮರು ಹಂಚಿಕೆಯ ಪ್ರಸ್ತಾಪ ಮಾಡಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ದೂರುತ್ತಿದ್ದಾರೆ ಮತ್ತು ಆ ಮೂಲಕ ದ್ವೇಷ ಹರಡಲು ಪ್ರಯತ್ನಿಸಿರುವುದು ವಿಷಾದಕರ.
ಈ ದೇಶಕ್ಕಾಗಿ ಚರಿತ್ರೆಯ ಮುಸ್ಲಿಮರು,ಆಡಳಿತಗಾರರು ಅವರ ಸರ್ವಸ್ವವನ್ನೂ ಕೊಡುಗೆ ನೀಡಿ ಈ ದೇಶವನ್ನು ನಿರ್ಮಾಣ ಮಾಡಿದ್ದಾರೆ. ಮೊಗಲರು, ಸುಲ್ತಾನರು, ಕಬೀರರು, ಸೂಫಿಗಳು ಸಂತರು ಈ ದೇಶಕ್ಕೆ ಅರ್ಪಿಸಿದ ಕೊಡುಗೆಗಳನ್ನು ಮೋದಿಯವರು ಅರಿಯ ಬೇಕು ಎಂದು ಕೆ. ಅಶ್ರಫ್ ಅವರು ಪ್ರತಿಕ್ರಿಯಿಸಿದ್ದಾರೆ.
ಕೆಂಪು ಕೋಟೆ, ತಾಜ್ ಮಹಲ್, ಗೋಲ್ ಗುಂಬಜ್,ಮಿನಾರ್ ಗಳಂತಹ ವಾಸ್ತು ಶಿಲ್ಪ, ಮೊಗಲ್, ಟಿಪ್ಪು ಸುಲ್ತಾನ್ ಆಡಳಿತ, ಈ ದೇಶದ ರಕ್ಷಣೆಗೆ ಮತ್ತು ಸ್ವಾತಂತ್ರ್ಯಕ್ಕಾಗಿ ನೀಡಿದ ಬಲಿದಾನ, ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಅಜಾದ್ ರವರು ಈ ದೇಶಕ್ಕೆ ನೀಡಿದ ಶಿಕ್ಷಣ ದಂತಹ ಕೊಡುಗೆಯ ಪ್ರತಿಪಲದ ಅನುಪಾತದ ಪ್ರಯೋಜನ ಇನ್ನೂ ಹಾಲಿ ಭಾರತದ ಮುಸ್ಲಿಮರು ಬಯಸಿಲ್ಲ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮೀಸಲಿಟ್ಟ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಮುಸ್ಲಿಮರು ಇಂದು ಮೀಸಲಾತಿಯ ಪ್ರಯೋಜನ ಅಪೇಕ್ಷಿಸಿದ್ದನ್ನು ಮೋದಿಯವರು ಕೋಮು ಮನಸ್ಥಿತಿಯಿಂದ ಅಳೆದರೆ ಅದು ಅವರ ಅಜ್ಞಾನ ಮತ್ತು ಕೀಳುಮಟ್ಟದ ರಾಜಕೀಯವನ್ನು ಬಿಂಬಿಸಿದೇ ಹೊರತು ಬೇರೇನೂ ಅಲ್ಲ.
ಮೋದಿಯವರು ಮುಸ್ಲಿಮರನ್ನು ಅಧಿಕ ಮಕ್ಕಳಿರುವವರು ಎಂದು ಸಂಭೋದಿಸಿದರೆ, ಅಂತಹ ಮಕ್ಕಳನ್ನು ಈ ದೇಶದ ರಕ್ಷಣೆಗಾಗಿ ಮೀಸಲಿಡಲಿದ್ದೇವೆ. ಮೋದಿಯವರು ತಮ್ಮ ರಾಜ್ಯದಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಾತ್ಮ ಗಾಂದಿ,ವಲ್ಲಭಭಾಯಿ ಪಟೇಲ್ ಹೊರತಾದ ಇತರರ ಹೆಸರನ್ನು ಹುಡುಕುವ ಧೈರ್ಯವನ್ನಾದರೂ ಮಾಡಲಿ. ಮೋದಿಯವರು ತಮ್ಮ ನಿರ್ಗಮನ ವೇಳೆಯಲ್ಲಿಯಾದರೂ ರಾಜಧರ್ಮದ ಕಿಂಚಿತ್ ತತ್ವವನ್ನಾದರೂ ಪಾಲಿಸಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್,
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ