ಮಂಗಳೂರು: ಇತ್ತೀಚೆಗೆ ಕೊಚ್ಚಿಯ ಕಳಮಶೇರಿಯಲ್ಲಿ ನಡೆದ ಸ್ಫೋಟ ಘಟನೆಯ ಸುದ್ದಿಯನ್ನು, ತಲೆಗೆ ಟೋಪಿ ಹಾಕಿದ ವ್ಯಕ್ತಿಯ ಫೋಟೋ ಪ್ರದರ್ಶಿಸಿ ಮತ್ತು ಇತರ ಸುಳ್ಳು ಸುದ್ದಿಯನ್ನು ಪ್ರಕಟಿಸಿ,ಮುಸ್ಲಿಮ್ ವಿದ್ವೇಶವನ್ನು ಮೆರೆದ ಪವರ್ ಟಿವಿ ನ್ಯೂಸ್ ಬ್ಲಾಗ್ ನ ಪುವರ್ ತನವೆಂಬ ಸಣ್ಣತನವನ್ನು ಜನರು ಅರಿಯಬೇಕಿದೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಯಾವುದಾದರೂ ಘಟನೆ ನಡೆದರೆ ತಮ್ಮ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಬಿಚ್ಚಿ ಅದನ್ನು ಶತಾಯ ಗತಾಯ ಮುಸ್ಲಿಮ್ ಸಮುದಾಯದ ವಿರುದ್ಧ ಎತ್ತಿಕಟ್ಟುವ ಪವರ್ ನಂತಹ ಸುಳ್ಳು ಸುದ್ದಿ ಬಾಕರರ ಇಂತಹ ಸುದ್ದಿಗಳಿಂದ ಓದುಗರು ಮತ್ತು ವೀಕ್ಷಕರು ಒಂದು ಸಮುದಾಯದ ಜನರನ್ನು ತಪ್ಪು ಭಾವನೆಯಿಂದ ಸೃಷ್ಟಿಸಲು ಕಾರಣವಾಗುವುದು ಮಾದ್ಯಮ ರಂಗ ಸೃಷ್ಟಿಸಿದ ಒಂದು ಮಹಾ ದುರಂತವೇ ಸರಿ,ಜನರು ಇದನ್ನು ಅರಿಯಬೇಕಿದೆ.

ಘಟನೆಯ ತನಿಖೆಯ ವಿವರವನ್ನು ಪೊಲೀಸರು ಬಹಿರಂಗ ಪಡಿಸುವ ಪೂರ್ವದಲ್ಲಿಯೇ ತಮ್ಮ ಬಿಟ್ಟಿ ತೀರ್ಪು ನೀಡಿ ಸಾರ್ವಜನಿಕರ ಮತ್ತು ಮುಗ್ದರ ಮನಸ್ಸಿನಲ್ಲಿ ಒಂದು ಸಮುದಾಯವನ್ನು ಆರೋಪಿತ ಸ್ಥಾನಕ್ಕೆ ತಂದು ನಿಲ್ಲಿಸುವ ಇಂತಹ ಬೇಜವಾಬ್ದಾರಿ ಪತ್ರಿಕೋದ್ಯಮಕ್ಕೆ ಈ ದೇಶದಲ್ಲಿ ನಡೆದ ಅದೆಷ್ಟೋ ಅನ್ಯಾಯ ಅಕ್ರಮಗಳು ಸುದ್ದಿಯಾಗದೆ ಇದ್ದುದ್ದು ವಿಪರ್ಯಾಸ. ಪವರ್ ಟಿವಿ ಯಂತಹ ಪುಂಗಿ ಮಾಧ್ಯಮವನ್ನು ಜನರು ತಿರಸ್ಕರಿಸಬೇಕಿದೆ. ಸುಳ್ಳು ಸುದ್ದಿ ಪ್ರಕಟಿಸಿದ ಮಾದ್ಯಮದ ಮೇಲೆ ವಾರ್ತಾ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕೆ.ಅಶ್ರಫ್(ಮಾಜಿ ಮೇಯರ್) ಆಗ್ರಹಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್