ಕೋಝಿಕ್ಕೋಡ್: ಇಸ್ರೇಲ್ ಆಕ್ರಮಣವನ್ನು ಫೆಲೆಸ್ತೀನಿಯರು ಪ್ರತಿರೋಧಿಸುತ್ತಿದ್ದಾರೆ ಹೊರತು, ಭಯೋತ್ಪಾದನೆಯಲ್ಲ ಎಂದು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಸ್ವಾದಿಖಲಿ ಶಿಹಾಬ್ ತಂಙಳ್ ಹೇಳಿದ್ದಾರೆ. ಇಸ್ರೇಲ್ಗೆ ಬಿಳಿ ಬಣ್ಣ ಬಳಿಯುವ ಕೇಂದ್ರ ಸರ್ಕಾರದ ನಿಲುವು ಆಕ್ಷೇಪಾರ್ಹವಾಗಿದ್ದು, ಇಸ್ರೇಲ್ಗೆ ಬೆಂಬಲ ನೀಡುವವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸ್ವಾದಿಖಲಿ ತಂಙಳ್ ಹೇಳಿದರು.
ಇಸ್ರೇಲ್ ವಿಶ್ವದ ಅತಿದೊಡ್ಡ ಭಯೋತ್ಪಾದಕ ರಾಷ್ಟ್ರವಾಗಿದ್ದು, ಇಸ್ರೇಲ್ಗೆ ಉತ್ತಮವಾಗಿ ವರ್ತಿಸಲು ತರಬೇತಿ ನೀಡಲು ವಿಶ್ವದ ರಾಷ್ಟ್ರಗಳು ಸಿದ್ಧವಾಗಬೇಕು ಎಂದು ಸ್ವಾದಿಖಲಿ ತಂಙಳ್ ಸೂಚಿಸಿದರು. ಫೆಲೆಸ್ತೀನ್ ಜನರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಮುಸ್ಲಿಂ ಲೀಗ್ ಆಯೋಜಿಸಿದ್ದ ಮಾನವ ಹಕ್ಕುಗಳ ಮಹಾ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಮುಖ್ಯ ಭಾಷಣ ವಿವಾದ: ಬಿಕ್ಕಟ್ಟಿಗೆ ಸಿಲುಕಿದ ಲೀಗ್
ಹಮಾಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಮುಸ್ಲಿಂ ಲೀಗ್ ವೇದಿಕೆಯಲ್ಲಿ ಶಶಿ ತರೂರ್ ಹೇಳಿರುವುದು ಪಕ್ಷವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.ಲೀಗ್ ಇಸ್ರೇಲ್ ಪರ ಎಂಬ ಪ್ರಚಾರವು ಸೋಷಿಯಲ್ ಮೀಡಿಯಾದಲ್ಲಿ ಪ್ರಬಲಗೊಂಡ ಪರಿಸ್ಥಿತಿಯಲ್ಲಿ ಶಶಿ ತರೂರ್ ಸಂಸದ ಸ್ಪಷ್ಟೀಕರಣ ನೀಡಿದ್ದಾರೆ.
ವಿವಾದದ ಸುಳಿಗೆ ಸಿಲುಕಿದ ಬಳಿಕ ಶಶಿ ತರೂರ್ ಅವರು “ಪ್ಯಾಲೆಸ್ತೀನ್ ಜನರೊಂದಿಗೆ ಸದಾ ಇರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಭಾಷಣವನ್ನು ಯಾರೂ ಇಸ್ರೇಲ್ ಪರವಾಗಿ ಅರ್ಥೈಸಬಾರದು ಎಂದು ತರೂರ್ ಹೇಳಿದ್ದಾರೆ. ಭಾಷಣದ ಒಂದು ವಾಕ್ಯವನ್ನು ಮಾತ್ರ ಎತ್ತಿಹಿಡಿದು ಹರಡುವುದನ್ನು ನಾನು ಒಪ್ಪುವುದಿಲ್ಲ ಎಂದು ತರೂರ್ ಹೇಳಿದರು.
ಲಕ್ಷಗಟ್ಟಲೆ ಜನ ಸೇರಿದ್ದ ದೊಡ್ಡ ಕಾರ್ಯಕ್ರಮಕ್ಕೆ ಶಶಿ ತರೂರ್ ಅವರ ಪ್ಯಾಲೆಸ್ತೀನ್ ವಿರೋಧಿ ಹೇಳಿಕೆಗಳು ಕಳಂಕ ತಂದಿವೆ ಎಂದು ಲೀಗ್ ಅಭಿಪ್ರಾಯಪಟ್ಟಿದೆ. ಕಾರ್ಯಕ್ರಮದಲ್ಲಿ ತರೂರ್ ಅವರನ್ನು ವಿಶ್ವಮಾನವರಾಗಿ ಕರೆತರಲು ಮುಂದಾದವರು ಯಾರು ಎಂಬ ಪ್ರಶ್ನೆ ಕೂಡ ಪಕ್ಷದಲ್ಲಿ ಮೂಡುತ್ತಿದೆ.
ಸಮಸ್ತ ಇಕೆ ಬಣವನ್ನು ಆಹ್ವಾನಿಸದೆ ಲೀಗ್ ತನ್ನದೇ ಆದ ಶಕ್ತಿ ಪ್ರದರ್ಶಿಸಿದ ಕಾರ್ಯಕ್ರಮದಲ್ಲುಂಟಾದ ಹಿನ್ನಡೆಯನ್ನು ಇಕೆ ಬಣವೂ ಲೀಗ್ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. EK ವಿಭಾಗದ ಪೋಷಕ ಸಂಘಟನೆಗಳು ಲೀಗ್ನ ವಿರುದ್ಧ ತೀವ್ರ ಟೀಕೆಯೊಂದಿಗೆ ಮುಂದೆ ಬಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಲೀಗ್ನ ಮೇಲೆ ತೀವ್ರ ಪ್ರಹಾರ ನಡೆಸಿದೆ.
ಮುಸ್ಲಿಂ ಲೀಗ್ ನೇತೃತ್ವದಲ್ಲಿ ನಡೆದ ಸಮಾವೇಶ ಇಸ್ರೇಲ್ ಪರವಾದ ಸಮಾವೇಶ ಎಂಬ ಆರೋಪದೊಂದಿಗೆ ಕೆ.ಟಿ.ಜಲೀಲ್ ಮಾಡಿದ ಟೀಕೆಯನ್ನು ಹಲವರು ಕೈಗೆತ್ತಿಕೊಂಡರು. ರ್ಯಾಲಿಯ ಮುಖ್ಯ ಭಾಷಣಕಾರ ಶಶಿ ತರೂರ್ ಅವರ ಭಾಷಣ ಕೇಳಿದರೆ ಇದು ಇಸ್ರೇಲ್ ಪರವಾದ ಸಮಾವೇಶವೆಂದೇ ಯಾರಿಗೂ ಅನಿಸುತ್ತದೆ. ಲೀಗ್ನ ಈ ವಂಚನೆಯನ್ನು ಪ್ಯಾಲೆಸ್ತೀನ್ ಮಕ್ಕಳು ಅಂತ್ಯದಿನದವರೆಗೂ ಸಹಿಸಲಾರರು. ಮನ ನೊಂದಿರುವ ಪ್ಯಾಲೆಸ್ತೀನ್ ಜನರನ್ನು ನೋಡಿ ನೋವಿನಿಂದ ಸೇರಿದ ಜನರ ಮುಂದೆ ಶಶಿ ತರೂರ್ ಅವರು ಇಸ್ರೇಲ್ ಮಾಲಾ ಹಾಡಿದ್ದಾರೆ ಎಂದು ಜಲೀಲ್ ಆರೋಪಿಸಿದರು. ಮುಸ್ಲಿಂ ಲೀಗ್ ವೆಚ್ಚದಲ್ಲಿ ಕೋಝಿಕ್ಕೋಡ್ ಕಡಲ ತೀರದಲ್ಲಿ ಶಶಿ ತರೂರ್ ಇಸ್ರೇಲ್ ಒಗ್ಗಟ್ಟಿನ ಸಭೆ ನಡೆಸಿದ್ದಾರೆ ಎಂದು ಸಿಪಿಎಂ ನಾಯಕ ಎಂ ಸ್ವರಾಜ್ ಆರೋಪಿಸಿದರು.
ಇಸ್ರೇಲ್ ಸಂಪೂರ್ಣ ಭಯೋತ್ಪಾದಕ ರಾಷ್ಟ್ರ ಎಂದು ಹೇಳಲು ಕಾಂಗ್ರೆಸ್ ನಾಯಕ ತರೂರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಇಸ್ರೇಲ್ ಟೆಲ್ ಅವೀವ್ನಿಂದ ಪ್ಯಾಲೆಸ್ತೀನ್ ಮೇಲೆ ದಾಳಿ ನಡೆಸುತ್ತಿದೆ ಮತ್ತು ಲೀಗ್ ವೇದಿಕೆಯಿಂದ ತರೂರ್ ದಾಳಿ ನಡೆಸಿದರು ಎಂದು ಸ್ವರಾಜ್ ಆರೋಪಿಸಿದರು.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ