ರಿಯಾದ್: ಸೌದಿ ಅರೇಬಿಯಾವು ಕೋವಿಡ್ ಹಿನ್ನೆಲೆಯಲ್ಲಿ ಹೇರಿದ ಅಂತರರಾಷ್ಟ್ರೀಯ ಪ್ರಯಾಣ ನಿಷೇಧವನ್ನು ಮೇ 17 ರಂದು ತೆರವುಗೊಳಿಸಲಾಗುವುದಾಗಿ ಸೌದಿ ಆಂತರಿಕ ಸಚಿವಾಲಯ ಪ್ರಕಟಿಸಿದೆ. ಅಂದು ಬೆಳಿಗ್ಗೆ ಒಂದು ಗಂಟೆಯ ಹೊತ್ತಿಗೆ ದೇಶದ ರಸ್ತೆ, ಜಲ ಮತ್ತು ವಾಯು ಮಾರ್ಗವು ಸಾಮಾನ್ಯ ಸ್ಥಿತಿಗೆ ಮರಳಲಿದೆ.
ಈ ಮೂಲಕ ಸೌದಿ ಪ್ರಜೆಗಳಿಗೆ ದೇಶದ ಹೊರಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಆದಾಗ್ಯೂ, ಅಂತಹ ಪ್ರಯಾಣಕ್ಕಾಗಿ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಗೃಹ ಸಚಿವಾಲಯವು ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ.
- ಪ್ರಯಾಣಿಕರು ಎರಡು ಡೋಸ್ ಕೋವಿಡ್ ಲಸಿಕೆ ಹಾಕಿರಬೇಕು ಅಥವಾ ಒಂದು ಡೋಸ್ ಹಾಕಿ 14 ದಿನಗಳು ಪೂರ್ಣಗೊಂಡಿರಬೇಕು.ಇದನ್ನು ತವಕಲ್ನಾ ಅಪ್ಲಿಕೇಶನ್ನಲ್ಲಿ ಅಪ್ಡೇಟ್ ಮಾಡಿರಬೇಕು.
- ಕೋವಿಡ್ ಅನಾರೋಗ್ಯದಿಂದ ಚೇತರಿಸಿಕೊಂಡವರು ಆರು ತಿಂಗಳು ಪೂರ್ಣಗೊಂಡಿರಬೇಕು. ಇದನ್ನೂ ತವಕಲ್ನಾ ಅಪ್ಲಿಕೇಶನ್ನಲ್ಲಿ ಅಪ್ಡೇಟ್ ಮಾಡಿರಬೇಕು.
- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಪ್ರಯಾಣಿಸಲು ಬಯಸಿದರೆ ಕೋವಿಡ್ ವಿರುದ್ಧ ಸೌದಿ ಅರೇಬಿಯಾದ ಸೆಂಟ್ರಲ್ ಬ್ಯಾಂಕ್ ಅನುಮೋದಿಸಿದ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳಬೇಕು.
- ವಿದೇಶದಿಂದ ಹಿಂದಿರುಗಿದ ಎಂಟು ವರ್ಷಕ್ಕಿಂತ ಮೇಲ್ಪಟ್ಟವರು ಸೌದಿ ಅರೇಬಿಯಾಕ್ಕೆ ಪ್ರವೇಶಿಸಿ ಏಳು ದಿನಗಳ ಕಾಲ ಮನೆಯಲ್ಲಿ ಕ್ಯಾರೆಂಟೈನ್ ಅನ್ನು ಪೂರ್ಣಗೊಳಿಸಬೇಕು. ನಂತರ ಪಿಸಿಆರ್ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು.
- ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮುಖವಾಡಗಳನ್ನು ಧರಿಸುವುದು ಅತ್ಯಗತ್ಯ, ಕೋವಿಡ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ದೇಶಗಳಿಗೆ ಪ್ರಯಾಣಿಸುವವರು ಜಾಗರೂಕರಾಗಿರಬೇಕು ಎಂದು ಆಂತರಿಕ ಸಚಿವಾಲಯ ಎಚ್ಚರಿಸಿದೆ.
ಮೇ 17 ರಂದು ಅಂತರರಾಷ್ಟ್ರೀಯ ಪ್ರಯಾಣ ನಿಷೇಧವನ್ನು ತೆಗೆದುಹಾಕುವ ವೇಳೆ ವಿದೇಶಿ ಪ್ರಯಾಣಿಕರ ಪ್ರಯಾಣದ ಮಾನದಂಡಗಳು ಏನೆಂದು ಅಥವಾ ಪ್ರಸ್ತುತ ಪ್ರಯಾಣ ನಿಷೇಧದಲ್ಲಿರುವ 20 ದೇಶಗಳಿಗೆ ಪ್ರಯಾಣವನ್ನು ಆ ದಿನಾಂಕದಿಂದ ಅನುಮತಿಸಲಾಗುತ್ತದೆಯೇ ಎಂಬ ಬಗ್ಗೆ ಗೃಹ ಸಚಿವಾಲಯ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಯಗಳನ್ನು ಪ್ರಕಟಿಸಲಾಗುವುದು ಎಂದು ಆಶಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು