ಕತಾರ್: ಬೇಸಿಗೆಯ ಉಷ್ಣತೆ ಏರಿರುವ ಕಾರಣ ಏರ್ಪಡಿಸಲಾದ ಮಧ್ಯಾಹ್ನ ವಿಶ್ರಮವು ಪತ್ರಿಕೆ, ಆಹಾರ ವಿತರಣೆ ವಲಯದಲ್ಲಿ ಕೆಲಸ ಮಾಡುವವರಿಗೂ ಅನ್ವಯಿಸುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ. ಕಾನೂನು ಉಲ್ಲಂಘಿಸಿ, ಇಂತಹ ವಲಯದಲ್ಲಿ ಕೆಲಸ ಮಾಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಜೂನ್ 15ರಿಂದ ಅಲ್ಲಿ ಮಧ್ಯಾಹ್ನ ವಿಶ್ರಾತಿ ಸಮಯವು ಜಾರಿಗೆ ಬಂದಿದೆ. ಆ ಪ್ರಕಾರ ಪೂರ್ವಾಹ್ನ 11:30ಯಿಂದ ಅಪರಾಹ್ನ 3:30ವರೆಗೆ ಹೊರಗೆ ಕೆಲಸ ಮಾಡುವ ಕಾರ್ಮಿಕರಿಗೆ ಬಿಡುವು ನೀಡಬೇಕಾಗುತ್ತದೆ.
ಆದರೆ, ಪತ್ರಿಕೆ ವಿತರಣೆ, ಹೊಟೆಲ್, ಕಫ್ಟೇರಿಯಾ ಮುಂತಾದವುಗಳ ಹೋಂ ಡೆಲಿವರಿ ಕಾರ್ಮಿಕರು ಈ ಸಮಯಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ವಿವಿಧ ಪತ್ರಿಕೆ ಮತ್ತು ಪೋರ್ಟಲ್ ಮೂಲಕ ವರದಿಯಾಗಿದ್ದವು. ಆ ಹಿನ್ನೆಲೆಯಲ್ಲಿ ಲೇಬರ್ ಸೋಶಿಯಲ್ ಅಫೇರ್ಸ್ ಸಚಿವಾಲಯದ ವೃತ್ತಿ ಸುರಕ್ಷಾ ಆರೋಗ್ಯ ವಿಭಾಗದ ಉನ್ನತ ಅಧಿಕಾರಿ ಜಾಬಿರ್ ಅಲಿ ಅಲ್ ಮಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಾಹ್ನ ವಿಶ್ರಾಂತಿ ಸಮಯಕ್ಕೆ ಸಂಬಂಧಿಸಿದಂತೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ಎಲ್ಲಾ ಕಾರ್ಮಿಕರಿಗೂ ಇದು ಅನ್ವಯಿಸುತ್ತಿದ್ದು, ಅವರಿಗೆ ಅವಶ್ಯಕವಾದ ನೀರು, ಉಷ್ಣತೆಯಿಂದ ರಕ್ಷಣೆ ನೀಡಬಲ್ಲ ಬಾರ ಕಡಿಮೆ ಇರುವ ವಸ್ತ್ರಗಳನ್ನು ನೀಡಲು ಕಂಪೆನಿಗಳಿಗೆ ಬಾಧ್ಯತೆ ಇದೆ.
ಕಂಪನಿಗಳು ಕಾನೂನು ಪಾಲಿಸುವುದನ್ನು ಖಾತರಿಪಡಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಅಪರಾಧ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ತೆರೆದ ಪ್ರದೇಶಗಳಲ್ಲಿ ಕೆಲಸ ಮಾಡುವವರನ್ನು ಕಂಡುಬಂದಲ್ಲಿ ಅವರನ್ನು ಕೆಲಸದಿಂದ ವಿರಾಮ ನೀಡಿ , ಹವಾನಿಯಂತ್ರಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗುವುದು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಈ ಬಗ್ಗೆ ಸಚಿವಾಲಯದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ