janadhvani

Kannada Online News Paper

ಕೆಸಿಎಫ್ ಕುವೈತ್: ಬೃಹತ್ ಮೀಲಾದ್ ಸಮಾವೇಶ- ಕರಪತ್ರ ಬಿಡುಗಡೆ

ಕುವೈತ್:ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆ.ಸಿ.ಎಫ್)ಕುವೈತ್ ಇದರ ವತಿಯಿಂದ “ಇಲೈಕ ಯಾ ರಸೂಲಲ್ಲಾ” ಓ ಸಂದೇಶ ವಾಹಕರೆ ತಮ್ಮಡೆಗೆ ಎಂಬ ಘೋಷವಾಕ್ಯದಡಿಯಲ್ಲಿ ನಡೆಸಲ್ಪಡುವ ಬೃಹತ್ ಮೀಲಾದ್ ಸಮಾವೇಶವು ಇದೇ ಬರುವ ನವಂಬರ್ 30 ಶುಕ್ರವಾರ ಸಂಜೆ 5ಕ್ಕೆ ಇಂಡಿಯನ್ ಸೆಂಟ್ರಲ್ ಸ್ಕೂಲ್ ಅಬ್ಬಾಸಿಯಾ ಸಭಾಂಗಣದಲ್ಲಿ ನಡೆಯಲಿದೆ.ಪ್ರಸ್ತುತ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೋಯಮ್ಮ ತಙಳ್ ಕೂರತ್ ದುಆ ಆಶೀರ್ವಚನ ನೀಡಲಿದ್ದಾರೆ.

ಕೇರಳ SSF ರಾಜ್ಯಾಧ್ಯಕ್ಶರು ಡಾ:ಫಾರೂಖ್ ನಈಮಿ ಕೊಲ್ಲಂ ಮುಖ್ಯ ಭಾಷಣಗೈಲಿದ್ದಾರೆ.