janadhvani

Kannada Online News Paper

ಎಸ್ಸೆಸ್ಸೆಫ್ ಧ್ವಜ ದಿನದ ಅಂಗವಾಗಿ SSF ಮಿತ್ತರಾಜೆ ಶಾಖೆಯ ವತಿಯಿಂದ ಧ್ವಜಾರೋಹಣ.

ಸಾಲೆತ್ತೂರ್ : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (SSF) 29 ವರ್ಷಗಳನ್ನು ಪೂರ್ಣಗೊಳಿಸಿ 30’ನೇ ವರ್ಷಕ್ಕೆ ಕಾಲಿಟ್ಟಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ಶಾಖೆಗಳಲ್ಲಿ ಧ್ವಜ ದಿನ’ವನ್ನಾಗಿ ಆಚರಿಸುತ್ತಿದೆ.

ಎಸ್.ಎಸ್.ಎಫ್ ಮಿತ್ತರಾಜೆ ಶಾಖೆಯ ವತಿಯಿಂದ ಧ್ವಜಾರೋಹವು ಇಂದು (19-9-2018) ಬೆಳಿಗ್ಗೆ ರಿಫಾಯಿಯ್ಯ ಜುಮಾ ಮಸ್ಜಿದ್ ಪಂಜರಕೋಡಿ ವಠಾರದಲ್ಲಿ ಖತೀಬರಾದ ಅಬೂಬಕ್ಕರ್ ಮದನಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಎಸ್.ವೈ.ಎಸ್ ಪಂಜರಕೋಡಿ ಅಧ್ಯಕ್ಷರಾದ ಇಬ್ರಾಹಿಂ ಮಿತ್ತರಾಜೆ ಮತ್ತು ಎಸ್.ಎಸ್.ಎಫ್ ಮಿತ್ತರಾಜೆ ಶಾಖೆಯ ಅಧ್ಯಕ್ಷರಾದ ಹಮೀದ್’ರವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹಂಝತ್ತುಲ್ ಖರ್ರಾರ್ ಮುಈನಿ ಸಂದೇಶ ಭಾಷಣ ಮಾಡಿದರು. ಮುಹಲ್ಲಿಂ ಶರೀಫ್ ಹನೀಫಿ ಮಾರ್ನಾಡ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.