janadhvani

Kannada Online News Paper

ಜುಮಾ ನಂತರ ವಿಶೇಷ ಪ್ರಾರ್ಥನೆಗೆ ಸೂಚನೆ

ಕೇರಳದ ಹಾಗೂ ಕರ್ನಾಟಕದ ಕೆಲವು ಜಿಲ್ಲೆ ಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಹಲವಾರು ಕಡೆ ಅನಾಹುತಗಳಿಂದ ಜನಸಾಮಾನ್ಯರು ಸಂಕಷ್ಟ ಕ್ಕೀಡಾಗುತ್ತಿದ್ದಾರೆ ..ಪ್ರಾಣ ಹಾನಿ ಸಮೇತ ಹಲವು ನಷ್ಟ ಗಳು ಸಂಭವಿಸುತ್ತಿದೆ.ಇದರಿಂದ ಎಲ್ಲರ ರಕ್ಷಣೆ ಗಾಗಿ ನಾಳೆ ಜುಮಾ ನಮಾಜಿನ ನಂತರ ವಿಶೇಷ ಪ್ರಾರ್ಥನೆ ಮಾಡಲು ಎಲ್ಲಾ ಮಸೀದಿಗಳ ಖತೀಬರು ಹಾಗೂ ಆಡಳಿತ ಸಮಿತಿಗೆ ಉಡುಪಿ ಚಿಕ್ಕಮಗಳೂರು ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್  ಸೂಚಿಸಿರುತ್ತಾರೆ.

ಅಶ್ರಪ್ ಕಿನಾರ ಮಂಗಳೂರು