janadhvani

Kannada Online News Paper

ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ

ಚಿಕ್ಕಮಗಳೂರು ಮಾರ್ಚ್ 04/2026 ರಂದು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದೆ ದಿನಾಂಕ 19.07.2022 ರ ಸರ್ಕಾರದ ಆದೇಶ ಸಂಖ್ಯೆ RD/114/MuDaPra/2022 ಅನ್ವಯ, ಪವಿತ್ರ ಗುಹೆಯೊಳಗಿನ ಗೋರಿಗಳಿಗೆ ಗಂಧ ಲೇಪನ, ಚಾದರ್ ಸಮರ್ಪಣೆ, ಹೂವಿನ ಅಲಂಕಾರ ಹಾಗೂ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಪ್ರಾರ್ಥನೆ ಮಾಡಲು ಅವಕಾಶ ಇದ್ದು ಸಹ ಸರ್ಕಾರದ ವಿರುದ್ಧವಾಗಿ ನಡೆದುಕೊಂಡಿದೆ .

ಹಾಗೂ ಮಾನ್ಯ ಸುಪ್ರೀಂ ಕೋರ್ಟ್ ಆದೇಶ SLP (C) No. 10131/2023 ಅನುಸರಿಸಿ ಪರಂಪರೆಯ ವಿಧಿವಿಧಾನಗಳನ್ನು ಆಚರಿಸಲು ಶಾಖಾದ್ರಿ ಯವರಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅನುಮತಿಸಿರುವ ಆದೇಶಕ್ಕೆ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡರಾದ ಆಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ದೂರಿದ್ದಾರೆ .

ಸರ್ಕಾರದ ಆದೇಶ ಮತ್ತು ಶತಮಾನಗಳ ಸಂಪ್ರದಾಯದಂತೆ ಶಾಂತಿಯುತವಾಗಿ ಉರುಸ್ ಆಚರಣೆ ನಡೆಯಬೇಕು ಎಂಬುದು ನಮ್ಮ ಒತ್ತಾಯದೊಂದಿಗೆ ಇಂದು ಬಾಬಾ ಬುಡನ್ ದರ್ಗಾದಲ್ಲಿ ಸಂದಲ್ ಮತ್ತು ಉರುಸ್ ಕಾರ್ಯಕ್ರಮವು ಆಯೋಜಿಸಲಾಗಿತ್ತು ಆದರೆ ಜಿಲ್ಲಾಡಳಿತವು ಇಸ್ಲಾಂ ಧರ್ಮದ ಸೂಫಿ ಸಂತರ ಸಂಪ್ರದಾಯದಂತೆ ನೆರವೇರಿಸಲು ಅವಕಾಶ ಮಾಡಿ ಕೊಡಲು ನಿರಾಕರಿಸಿತು ಆದ್ದರಿಂದ ಶಾಖಾದ್ರಿ ಮತ್ತು ಸಮುದಾಯದ ವತಿಯಿಂದ ಉರುಸ್ ಕಾರ್ಯಕ್ರಮವನ್ನು ಬಹಿಷ್ಕರಿಸಿಲಾಯಿತು ಜಿಲ್ಲಾಡಳಿತವು ಸರ್ಕಾರದ ಆದೇಶದ ವಿರುದ್ಧ ಮತ್ತು ನ್ಯಾಯಾಲಯದ ಉಲ್ಲಂಘನೆ ಮಾಡಿದೆ ಅದಾಗಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಶಾಖಾದ್ರಿ ಯವರು ಮಾನ್ಯ ಗೌಸ್ ಮೊಹಿದ್ದೀನ್ ಶಾಖಾದ್ರಿ ಮತ್ತು ಸಮುದಾಯದ ಮುಖಂಡರ ಪರವಾಗಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖ್ಯಸ್ಥರಾದ ಆಲ್ ಹಾಜ್ ಮೊಹಮ್ಮದ್ ಶಾಹಿದ್ ರಜ್ವಿ ರವರು ನಿರ್ಧರಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.