ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ಜಿದ್ದಾದ ಶರಫಿಯ್ಯಾ ಸೆಕ್ಟರ್ ವತಿಯಿಂದ 13ನೇ ಕೆಸಿಎಫ್ ಫೌಂಡೇಶನ್ ಡೇ ಪ್ರಯುಕ್ತ ಬ್ರಹತ್ ರಕ್ತದಾನ ಶಿಬಿರವನ್ನು ಜಿದ್ದಾದ ಪಾರ್ಕ್ ನಲ್ಲಿ ಯಶಸ್ವಿಯಾಗಿ ಸಂಘಟಿಸಲಾಗಿತ್ತು. ಸುಮಾರು 56 ರಷ್ಟು ಕಾರ್ಯಕರ್ತರು ಮತ್ತು ಹಿತೈಷಿಗಳು ರಕ್ತದಾನವನ್ನು ಮಾಡಿದರು.

ರಕ್ತದಾನ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಲತೀಫ್ ಹಾಜಿ ಮರಕಡರವರ ಮುಂದಾಳತ್ವದಲ್ಲಿ ನಡೆಸಲಾಗಿತ್ತು. ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಅಶ್ರಫ್ ಎಂಎಸ್ ಕಕ್ಕಿಂಜೆ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಕಾಟಿಪಳ್ಳ, ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಇಸಾಕ್ ಮದನಿ ಕ್ರಷ್ಣಾಪುರ, ಪ್ರಧಾನ ಕಾರ್ಯದರ್ಶಿ ಆಸೀಫ್ ಪಕ್ಷಿಕೆರೆ, ಕೋಶಾಧಿಕಾರಿ ಆಸೀಫ್ ಕೋಟ ಸೇರಿದಂತೆ ಕೆಸಿಎಫ್ ಅಂತಾರಾಷ್ಟ್ರೀಯ ನೇತಾರರಾದ ಫಾರೂಕ್ ಕಾಟಿಪಳ್ಳ, ರಾಷ್ಟ್ರೀಯ ನೇತಾರರಾದ ಫಾರೂಕ್ ಸಅದಿ ಹೆಚ್ಕಲ್ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಫೌಂಡೇಶನ್ ಡೇ ಪ್ರಯುಕ್ತ ಸಿಹಿತಿಂಡಿಗಳನ್ನು ವಿತರಿಸಲಾಯಿತು.






